ಪ್ರೇರಣಾ ವಿರುದ್ಧ ಗುತ್ತೆದಾರರ ಗುಡುಗು! - ಟಿಪ್ಪರ್, ಜೆಸಿಬಿ ಮಾಲೀಕರಿಂದ ಹೋರಾಟಕ್ಕೆ ಸಾಥ್ - ರೋಡ್ ರೂಲರ್, ಟ್ರ್ಯ

ವರದಿಗಾರರು : ಬಸವರಾಜ ಕರ್ಕಿಹಳ್ಳಿ || ಸ್ಥಳ : ಕೊಪ್ಪಳ
ವರದಿ ದಿನಾಂಕ : 13-11-2025

ಪ್ರೇರಣಾ ವಿರುದ್ಧ ಗುತ್ತೆದಾರರ ಗುಡುಗು! - ಟಿಪ್ಪರ್, ಜೆಸಿಬಿ ಮಾಲೀಕರಿಂದ ಹೋರಾಟಕ್ಕೆ ಸಾಥ್ - ರೋಡ್ ರೂಲರ್, ಟ್ರ್ಯ

ಕೊಪ್ಪಳ: ಸಂಸದ ರಾಜಶೇಖರ ಹಿಟ್ನಾಳ ಒಡೆತನದ ಪ್ರೇರಣಾ‌ ಸಂಸ್ಥೆ ಮೂಲಕ ಕಟ್ಟಡ ಸಾಮಾಗ್ರಿ ಖರೀದಿ ವಿರೋಧಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೊಪ್ಪಳ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ, ಗುತ್ತಿಗೆದಾರರು ನಗರದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟಿಸಿದರು. ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಗುತ್ತಿಗೆದಾರರು, ಅಶೋಕ ವೃತ್ತದಲ್ಲಿ ಜಮಾಯಿಸಿ ಘೋಷಣೆ ಕೂಗಿದರು. ಪ್ರೇರಣಾ ಸಂಸ್ಥೆ ರದ್ದು ಮಾಡಬೇಕು. ಪ್ಯಾಕೇಜ್ ಮಾಡಿ ಟೆಂಡರ್ ಮಾಡುವುದನ್ನು ಅಧಿಕಾರಿಗಳು ಕೈ ಬಿಡಬೇಕು ಎಂದು ಘೋಷಣೆ ಕೂಗಿದರು. ಕೆಲ ಸುಮಾರು ಅರ್ಧ ಗಂಟೆ ಅಶೋಕ ವೃತ್ತದಲ್ಲಿ ಪ್ರತಿಭಟನೆ ಮಾಡಿದ್ದರಿಂದ ಸುಗಮ ಸಂಚಾರಕ್ಕೆ ತೊಂದರೆ ಉಂಟಾಯಿತು.

ನಂತರ ಗುತ್ತಿಗೆದಾರರು ಪ್ರತಿಭಟನಾ ಮೆರವಣಿಗೆ ಮುಂದುವರೆಸಿದರು. ಗುತ್ತಿಗೆದಾರರ ಹಿಂದೆಯೇ ಸುಮಾರು 50ಕ್ಕೂ ಹೆಚ್ಚು ಟಿಪ್ಪರ್, ಟ್ರ್ಯಾಕ್ಟರ್, ರೋಡ್ ರೂಲರ್ ಯಂತ್ರಗಳನ್ನು ರಸ್ತೆಗೆ ಇಳಿಸಿದರು. ಇದರಿಂದ ಸಾರಿಗೆ ಬಸ್, ಬೈಕ್ ಸೇರಿ ಸಾರ್ವಜನಿಕರ ವಾಹನ ಓಡಾಟಕ್ಕೆ ತೊಂದರೆ ಉಂಟಾಯಿತು. ಅಶೋಕ ವೃತ್ತದಿಂದ ಬಸವೇಶ್ವರ ವೃತ್ತಕ್ಕೆ ಬಂದ ಹೋರಾಟಗಾರರು, ವೃತ್ತದಲ್ಲಿ ಜಮಾಯಿಸಿ, ಘೋಷಣೆ ‌ಕೂಗಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆಲವರು ರಸ್ತೆ ತಡೆಗೆ ಮುಂದಾದರು. ಇದರಿಂದ ಸಾರಿಗೆ ಬಸ್ ಸೇರಿ ಖಾಸಗಿ ವಾಹನ ಸವಾರರು ಪರದಾಡಿದ್ದು ಕಂಡು ಬಂತು. ಸುಮಾರು ಅರ್ಧ ಗಂಟೆ ಬಸವೇಶ್ವರ ವೃತ್ತದಲ್ಲಿ ಪ್ರತಿಭಟಿಸಿದ ನಂತರ ಜಿಲ್ಲಾಡಳಿತ ‌ಭವನದ‌ ಮುಂದೆ ಬಹಿರಂಗ ಸಭೆ ನಡೆಸಿದರು. ಸಭೆಯಲ್ಲಿ ಗುತ್ತಿಗೆದಾರರ ಸಂಘದ ಪ್ರಮುಖರು ಮಾತನಾಡಿ ಪ್ರೇರಣಾ ಸಂಸ್ಥೆ ಹಾಗೂ ಪ್ಯಾಕೇಜ್ ಗುತ್ತಿಗೆ ನೀಡುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ

ಸಂಘಟನೆ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ, ಎಸ್ಸಿ/ ಎಸ್ಟಿ ಸಿವಿಲ್ ಗುತ್ತಿಗೆದಾರರ ಸಂಘದ ಜಿಲಾಧ್ಯಕ್ಷ ಹನುಮೇಶ‌ ಕಡೆಮನಿ, ಗುತ್ತಿಗೆದಾರರಾದ ದೇವಪ್ಪ ಅರಕೇರಿ, ಯಮನೂರಪ್ಪ ನಡುಲಮನಿ, ಕೃಷ್ಣ ಇಟ್ಟಂಗಿ, ಶುಕ್ರಾಜ್ ತಾಳಕೇರಿ, ಶರಣಬಸವ ಹೂಗಾರ, ಎಲ್.ಎಂ.ಮಲ್ಲಯ್ಯ, ಸುರೇಶ, ದ್ಯಾಮಣ್ಣ ಪೂಜಾರ,‌ ರಾಮಣ್ಣ ಚೌಡಕಿ, ಬಸವರಾಜ ನಾಯಕ, ಎಸ್. ಪ್ರಸಾದ, ರಾಜಶೇಖರ, ಮಹಾಂತೇಶ ನಾಯಕ ಸೇರಿ ಇತರರು ಇದ್ದರು. ಹೋರಾಟಗಾರರ ಜೊತೆ ಡಿಸಿ ಮಾತು ಹೋರಾಟನಿರತ ಗುತ್ತಿಗೆದಾರರ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಮಾತನಾಡಿದರು. ಎಲ್ಲ ನ್ಯಾಯಯುತ ಬೇಡಿಕೆ ಈಡೇರಿಸುತ್ತೇನೆ. ನಿಯಮದಂತೆ ಕ್ರಷರ್ ಮಾಲೀಕರು ಶೇ. ೩೦ ರಷ್ಟು ಜಲ್ಲಿ ಕಲ್ಲು ಸರಕಾರಿ ಕೆಲಸಕ್ಕೆ ಮಾತ್ರ ಮಾರಾಟ ಮಾಡಬೇಕು. ಈ ನಿಯಮದಡಿ ಕ್ರಷರ್ ಮಾಲೀಕರು ನೇರವಾಗಿ ಗುತ್ತಿಗೆದಾರರಿಗೆ ಜಲ್ಲಿ ಕಲ್ಲು ಮಾರಾಟ ಮಾಡುವಂತೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು. ಇನ್ನು ನಮ್ಮ ವ್ಯಾಪ್ತಿಯ ಕಾಮಗಾರಿಗಳನ್ನು ಪ್ಯಾಕೇಜ್ ಮಾಡುವುದಕ್ಕೆ ಅವಕಾಶ‌ ನೀಡುವುದಿಲ್ಲ. ನಮ್ಮ ಮೇಲೆ ಭರವಸೆ ಇಟ್ಟು, ಹೋರಾಟ‌ ಹಿಂಪಡೆಯುವಂತೆ ಮನಃವೊಲಿಸಿದ್ದಾರೆ. ಈ ಹಿನ್ನೆಲೆ ಗುತ್ತಿಗೆದಾರರು ಹೋರಾಟವನ್ನು ಹಿಂಪಡೆದಿದ್ದಾರೆ.

ಹೋರಾಟಕ್ಕೆ ನಾನಾ ಸಂಘಟನೆ ಸಾಥ್ ಕೊಪ್ಪಳ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಹೋರಾಟಕ್ಕೆ ಟಿಪ್ಪರ್ ಮಾಲೀಕರು, ಗಾರೆ ಕೆಲಸಗಾರರ ಸಂಘದ ಪದಾಧಿಕಾರಿಗಳು ಸೇರಿ ವಿವಿಧ ಸಂಘ- ಸಂಸ್ಥೆ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದರು. ಕಟ್ಟಡ ಸಾಮಗ್ರಿ ಮಾರಾಟ ವ್ಯವಸ್ಥೆಯಲ್ಲಿ ಏಕಸ್ವಾಮ್ಯತೆ ಸಾಧಿಸುವ ಮೂಲಕ,‌ ತಮ್ಮ‌ ಮನಸ್ಸಿಗೆ ಬಂದ ರೀತಿಯಲ್ಲಿ ಬೆಲೆ ನಿಗದಿ ಮಾಡುವ ಪ್ರೇರಣಾ ಸಂಸ್ಥೆಯ ಹುನ್ನಾರ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಟಿಪ್ಪರ್ ಮಾಲೀಕರು ತಮ್ಮ ಟಿಪ್ಪರ್ ಸಮೇತ ಬಂದು ಹೋರಾಟಕ್ಕೆ ಬೆಂಬಲ ನೀಡಿದರು.

ಕ್ರಷರ್ ಮಾಲೀಕರು ಸುಮಾರು 100 ಕೋಟಿ ರೂ. ಬಾಕಿ ಇದೆ ಎಂಬುದು ಶುದ್ಧ ಸುಳ್ಳು. ಯಾವುದೇ ಬಾಕಿ ಇದ್ದರೂ ನಮ್ಮ ಮುಂದೆ ಬಂದು ತೋರಿಸಲಿ. ಕೂಡಲೇ ಅವರ ಹಣ ಪಾವತಿಸುವ ವ್ಯವಸ್ಥೆ ಮಾಡುತ್ತೇವೆ. ಕ್ರಷರ್ ಮಾಲೀಕರು ಕ್ವಾರಿಯಲ್ಲಿ ತೆಗೆಯುವ ಶೇ. 30 ರಷ್ಟು ಜಲ್ಲಿ ಕಲ್ಲು ಸರಕಾರಿ ಕೆಲಸಕ್ಕೆ ಮಾರಾಟ ಮಾಡಬೇಕು ಎಂಬ ನಿಯಮ ಇದೆ. ಪ್ರೇರಣಾ ಸೇರಿ ಯಾವುದೇ ಏಜೆನ್ಸಿ ಮೂಲಕ ನಾವು ಸಾಮಗ್ರಿ ಖರೀದಿ ಮಾಡುವುದಿಲ್ಲ. ಶಾಸಕ,‌ ಸಂಸದರು, ಎಲ್ಲ ಕಾಮಗಾರಿಗಳನ್ನು ಪ್ಯಾಕೇಜ್ ಮಾಡಿಸುವ ಮೂಲಕ ಮೀಸಲಾತಿ ಕೈ ತಪ್ಪುವಂತೆ ಮಾಡುತ್ತಿದ್ದಾರೆ. ಇದರಿಂದ ಸಣ್ಣ- ಪುಟ್ಟ ಗುತ್ತಿಗೆದಾರರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. - ಸುರೇಶ ಭೂಮರೆಡ್ಡಿ, ಜಿಲ್ಲಾಧ್ಯಕ್ಷ, ಕೊಪ್ಪಳ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘ,

ಗುತ್ತಿಗೆದಾರರು ಪ್ರೇರಣಾ ಸಂಸ್ಥೆ ಮೂಲಕ ಕಟ್ಟಡ ಸಾಮಾಗ್ರಿ ಖರೀದಿ ಮಾಡುವುದರಿಂದ ಆಡಿಟ್ ನಲ್ಲಿ ಸಮಸ್ಯೆ ಆಗುತ್ತದೆ. ಕ್ರಷರ್ ಮಾಲೀಕರಿಂದ ನೇರವಾಗಿ ಖರೀದಿ ಮಾಡಿದರೂ ಜಿಎಸ್ ಟಿ ಅಧಿಕಾರಿಗಳು ಪ್ರತಿ ತಿಂಗಳು ನೂರೊಂದು ತಕರಾರು ಎತ್ತುತ್ತಾರೆ. ನಾವು ಮಧ್ಯವರ್ತಿ ಸಂಸ್ಥೆ ಮೂಲಕ ಕಟ್ಟಡ ಸಾಮಾಗ್ರಿ ಖರೀದಿ ಮಾಡಿದರೆ ಮತ್ತಷ್ಟು ಸಮಸ್ಯೆ ಆಗಲಿದೆ. ಇದನ್ನು ಯಾವುದೇ ಕಾರಣಕ್ಕೆ ನಾವು ಒಪ್ಪುವುದಿಲ್ಲ. - ಕೃಷ್ಣ ಇಟ್ಟಂಗಿ, ಗುತ್ತಿಗೆದಾರ

ಸಂಸದ ರಾಜಶೇಖರ ಹಿಟ್ನಾಳ‌ ಅವರು ಗುತ್ತಿಗೆದಾರರನ್ನು ಉದ್ರಿ ಮಂದಿ ಎಂದು ಕರೆಯುತ್ತಾರೆ. ನಾವು ಯಾರ ಬಳಿ ಎಷ್ಟು ಉದ್ರಿ ಇಟ್ಟಿದ್ದೇವೆ ಎಂಬುದನ್ನು ಬಹಿರಂಗಪಡಿಸಲಿ. ತಮ್ಮ ಹಿತಾಸಕ್ತಿಗೆ ಪ್ರೇರಣಾ ಸಂಸ್ಥೆ ಹುಟ್ಟುಹಾಕಿ, ಗುತ್ತಿಗೆದಾರರು ಮತ್ತು ಕ್ರಷರ್ ಮಾಲೀಕರ ನಡುವೆ ಸಮಸ್ಯೆ ಸೃಷ್ಠಿಸಿದ್ದಾರೆ. ಪ್ಯಾಕೇಜ್ ಮಾಡಿ, ಗುತ್ತಿಗೆ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಆಶಯ ಮಣ್ಣು ಪಾಲು ಮಾಡುತ್ತಿದ್ದಾರೆ. - ಹನುಮೇಶ ಕಡೆಮನಿ, ಗುತ್ತಿಗೆದಾರ

ಪ್ರೇರಣಾ ಸಂಸ್ಥೆಯಿಂದ ಬೂದಗುಂಪ ಭಾಗದ ಸುಮಾರು 50 ರಿಂದ 60 ಟಿಪ್ಪರ್ ಮಾಲೀಕರಿಗೆ ಸಮಸ್ಯೆ ಆಗಿದೆ. ಕ್ರಷರ್ ಸ್ಥಾಪನೆಯಿಂದ ನಮ್ಮ ಜಮೀನು ಹಾಳಾಗಿವೆ. ನಮಗೆ ಈಗ ಟಿಪ್ಪರ್ ಜೀವನ ಆಧಾರ ಆಗಿವೆ. ಆದರೆ, ಪ್ರೇರಣಾ ಸಂಸ್ಥೆ ಮೂಲಕವೇ ಜಲ್ಲಿ ಕಲ್ಲು ಖರೀದಿ ಮಾಡಬೇಕು ಎಂಬ ನಿಯಮದಿಂದ ನಮಗೆ ತೊಂದರೆ ಆಗಿವೆ. ನಾವು ಕೆಲಸ ಮಾಡುವುದು ಟಿಪ್ಪರ್ ಡಿಸೇಲ್ ಗೆ ಸಾಲುತ್ತಿಲ್ಲ. ಸಾಕಷ್ಟು ಟಿಪ್ಪರ್ ಮಾಲೀಕರು ಇಎಂಐ ಕಟ್ಟಲು ಸಾಧ್ಯವಾಗದೇ ಬೀದಿಗೆ ಬಂದಿದ್ದೇವೆ. - ಟಿಪ್ಪರ್ ಮಾಲೀಕ ಫೋಟೋ ಕೊಪ್ಪಳದ ಬಸವೇಶ್ವರರ ವೃತ್ತದಲ್ಲಿ ಪ್ರೇರಣಾ‌ ಸಂಸ್ಥೆ ಮೂಲಕ ಕಟ್ಟಡ ಸಾಮಾಗ್ರಿ ಖರೀದಿ ವಿರೋಧಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೊಪ್ಪಳ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ಬುಧವಾರ ಪ್ರತಿಭಟಿಸಿದರು. ಫೋಟೋ ಕೊಪ್ಪಳದ ಬಸವೇಶ್ವರರ ವೃತ್ತದಲ್ಲಿ ಕೊಪ್ಪಳ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ರಸ್ತೆ ಬಂದ್ ಮಾಡಲು ಯತ್ನಿಸಿದರು.

ಇಂದಿನ ದಿನಗಳಲ್ಲಿ ಮ್ಯಾರೇಜ್ ಔಡ್ ಡೇಟೆಡ್ ಆಗಿದೆ. ಜಯಾ

ಒಟ್ಟು ಓದುಗರ ಸಂಖ್ಯೆ : 634+

ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ವಿಭಜನೆ ಅಗತ್ಯ;- ಲಕ್ಚ್ಮಿ ಹೆಬ್ಬಾಳ್ಕರ್

ಒಟ್ಟು ಓದುಗರ ಸಂಖ್ಯೆ : 858+

ಅಂಬೇಡ್ಕರ್ ಮಾರ್ಗ ಅನುಸರಿಸಿದಾಗ ಬದುಕು ಸಾರ್ಥಕ: ರಾಹುಲ್ ಖಂದಾರೆ

ಒಟ್ಟು ಓದುಗರ ಸಂಖ್ಯೆ : 937+

ಇಂಡಿಗೋ(ಳಾಟ) ಕೇಂದ್ರದ ಮಧ್ಯಸ್ಥಿಕೆ

ಒಟ್ಟು ಓದುಗರ ಸಂಖ್ಯೆ : 944+

ಚಳಿಗಾಲ ಮತ್ತು ಹೃದಯಸ್ತಂಬನ

ಒಟ್ಟು ಓದುಗರ ಸಂಖ್ಯೆ : 1075+

ಅನಿಸಿಕೆ ಇದು ನನ್ನ ಮನದಾಳದ ಮಾತು

ಒಟ್ಟು ಓದುಗರ ಸಂಖ್ಯೆ : 1072+

ಕೆ.ಎಸ್ ಸಿ.ಎ ಅಧ್ಯಕ್ಷರಾಗಿ ವೆಂಕಟೇಶ ಪ್ರಸಾಧ್ ಆಯ್ಕೆ

ಒಟ್ಟು ಓದುಗರ ಸಂಖ್ಯೆ : 1146+

ಇಂದು ಕುಂದಾನಗರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶ ಆರಂಭ..

ಒಟ್ಟು ಓದುಗರ ಸಂಖ್ಯೆ : 1170+

ಡಾ.ಬಿ.ಆರ್. ಅಂಬೇಡ್ಕರ್ ರವರ 69ನೇ ಮಹಾ ಪರಿನಿರ್ವಾಣ ದಿನ

ಒಟ್ಟು ಓದುಗರ ಸಂಖ್ಯೆ : 6401+

ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಬಳಕೆ ; ಸುಧಾ ಮೂರ್ತಿ ಕಳವಳ

ಒಟ್ಟು ಓದುಗರ ಸಂಖ್ಯೆ : 6946+

ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ: ವೈದ್ಯ ಮಂಜುನಾಥ್.

ಒಟ್ಟು ಓದುಗರ ಸಂಖ್ಯೆ : 6987+

ವೈಟ್‌ಫೀಲ್ಡ್‌ನ ಬೆಸ್ಕಾಂ ಉಪವಿಭಾಗ ಕಚೇರಿ ಉದ್ಘಾಟಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್.

ಒಟ್ಟು ಓದುಗರ ಸಂಖ್ಯೆ : 6987+

ಭಾರತದ ಶಾಂತಿ ತತ್ವ ಪ್ರತಿಪಾದಿಸಿದ ಪ್ರಧಾನಿ ಮೋದಿ.

ಒಟ್ಟು ಓದುಗರ ಸಂಖ್ಯೆ : 7011+

ಪ್ರಸಕ್ತ ವಿದ್ಯಮಾನದ ಮಹತ್ತರ ಬೆಳವಣಿ,ಭಾರತ ಮತ್ತು ರಷ್ಯಾ ನಡುವೆ ಮಹತ್ತರ ಒಪ್ಪಂದ

ಒಟ್ಟು ಓದುಗರ ಸಂಖ್ಯೆ : 7172+

ದುರ್ಗಮ ರಸ್ತೆ ಇದು ಹೇಗೆ ಓಡಾಡೋದು

ಒಟ್ಟು ಓದುಗರ ಸಂಖ್ಯೆ : 7202+

ಸಾಂಕ್ರಾಮಿಕವಲ್ಲದ ರೋಗಗಳ ಕುರಿತ ಮಾಹಿತಿ ನೀಡಿ: ಜೆಪಿ ನಡ್ಡಾಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ

ಒಟ್ಟು ಓದುಗರ ಸಂಖ್ಯೆ : 7230+

ಕಬಡ್ಡಿ, ಖೋಖೋ, ವಾಲಿಬಾಲ್: ಹಾಸನ ತಂಡ ಪ್ರಥಮ ೨೮ನೇ ರಾಜ್ಯ ಮಟ್ಟದ ಆದಿಚುಂಚನಗಿರಿ ಕ್ರೀಡಾಕೂಟ ಯಶಸ್ವಿ: ಚುಂಚಶ್ರೀ

ಒಟ್ಟು ಓದುಗರ ಸಂಖ್ಯೆ : 9091+

ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಪ್ಪನಹಳ್ಳಿ ಗ್ರಾಮದಲ್ಲಿ ನೂತನ ಸರ್ಕಾರಿ ನ್ಯಾಯಾ ಬೆಲೆ ಅಂಗಡಿ ಉದ

ಒಟ್ಟು ಓದುಗರ ಸಂಖ್ಯೆ : 9288+

ರಷ್ಯಾ ಅಧ್ಯಕ್ಷ ಮತ್ತು ಭದ್ರತೆ

ಒಟ್ಟು ಓದುಗರ ಸಂಖ್ಯೆ : 9421+

ಬೀದರದಲ್ಲಿ ಡಿಸೆಂಬರ್ 7 ರಂದು ಮಹಿಳೆಯರಿಗಾಗಿ ಕುರ್‍ಆನ್ ಪ್ರವಚನ

ಒಟ್ಟು ಓದುಗರ ಸಂಖ್ಯೆ : 9502+

ದ್ವೇಷ ಭಾಷಣಕ್ಕೆ 7 ವರ್ಷ ಜೈಲು: ಮಸೂದೆಗೆ ಸಚಿವ ಸಂಪುಟದ ಅನುಮೋದನೆ

ಒಟ್ಟು ಓದುಗರ ಸಂಖ್ಯೆ : 9514+

ಯಲಿಯೂರು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಅಧ್ಯಕ್ಷ–ಉಪಾಧ್ಯಕ್ಷರ ಅವಿರೋಧ ಚುನಾವಣೆ

ಒಟ್ಟು ಓದುಗರ ಸಂಖ್ಯೆ : 9516+

ಯಲಿಯೂರು ಹಾಲು ಉತ್ಪಾದಕರ ಸಂಘದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ಒಟ್ಟು ಓದುಗರ ಸಂಖ್ಯೆ : 9556+

ಅನಿಸಿಕೆ ಇದು ನನ್ನ ಮನದಾಳದ ಮಾತು

ಒಟ್ಟು ಓದುಗರ ಸಂಖ್ಯೆ : 9583+

ಗೃಹಲಕ್ಷ್ಮಿಯರಿಗೆ ರೂ. 30 ಸಾವಿರದಿಂದ 3 ಲಕ್ಷದವರೆಗೆ ಪರ್ಸನಲ್ ಲೋನ್ ಭಾಗ್ಯ

ಒಟ್ಟು ಓದುಗರ ಸಂಖ್ಯೆ : 10053+

ಭಾರತ ರಷ್ಯಾ 23 ನೇ ಶೃಂಗ ಸಭೆ. ಭರತನಾಟ್ಯ ಪ್ರದರ್ಶನದ ಮೂಲಕ ರಷ್ಯಾಧೀಶರಿಗೆ ಸ್ವಾಗತ.

ಒಟ್ಟು ಓದುಗರ ಸಂಖ್ಯೆ : 10080+

ಮರೆಯದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ.. ಡಿ.21 ರಿಂದ 24ರವರೆಗೆ ಅವಕಾಶ…1.40 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ

ಒಟ್ಟು ಓದುಗರ ಸಂಖ್ಯೆ : 10134+

ಜಿ.ಪಿ.ರಾಜರತ್ನಮ್ ಜನುಮದಿನ

ಒಟ್ಟು ಓದುಗರ ಸಂಖ್ಯೆ : 10147+

ಪದ್ಮಶ್ರೀ ಪುರಸೃತ ವೆಂಕಣ್ಣ ಸುಗತೆಕರ್ ಆರೋ್ಗ್ಯ ವಿಚಾರಿಸಿದ ಬಿಜೆಪಿ ಮುಖಂಡ ಡಾ. ಶೇಖರ ಮಾನೆ

ಒಟ್ಟು ಓದುಗರ ಸಂಖ್ಯೆ : 12233+

ಬೆಂಗಳೂರಿನಲ್ಲಿ ಭಾರತದ ಮೊದಲ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಮೇಳ

ಒಟ್ಟು ಓದುಗರ ಸಂಖ್ಯೆ : 12241+

ನಾಗೂರಾ ಯುವಕ ಸೈನ್ಯಕ್ಕೆ ಭರ್ತಿ : ಸನ್ಮಾನ

ಒಟ್ಟು ಓದುಗರ ಸಂಖ್ಯೆ : 12368+

ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ

ಒಟ್ಟು ಓದುಗರ ಸಂಖ್ಯೆ : 12374+

ಇಂದು ಸಂಜೆ ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಆಗಮನ

ಒಟ್ಟು ಓದುಗರ ಸಂಖ್ಯೆ : 12805+

ಡಿಸೆಂಬರ್ 4 ಭಾರತೀಯ ನೌಕಾಪಡೆಯ ದಿನ

ಒಟ್ಟು ಓದುಗರ ಸಂಖ್ಯೆ : 12853+

ದಾವಣಗೆರೆಯಲ್ಲಿ ಸರ್ಕಾರಿ ನಿವೇಶನಗಳು ಖಾಲಿ ಇದ್ದರೆ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ!

ಒಟ್ಟು ಓದುಗರ ಸಂಖ್ಯೆ : 12922+

ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ಧಿ

ಒಟ್ಟು ಓದುಗರ ಸಂಖ್ಯೆ : 13018+

ವಿಮಾನ ಸಂಚಾರದಲ್ಲಿ ವ್ಯತ್ಯಯ

ಒಟ್ಟು ಓದುಗರ ಸಂಖ್ಯೆ : 13027+

ಎ. ಪಿ. ಡಿ ಸಂಸ್ಥೆ ವತಿಯಿಂದ ಸರಕಾರಿ,ಅರೆಸರಕಾರಿ ಕಚೇರಿ ಅಡೆತಡೆ ಮುಕ್ತ ವಾತಾವರಣ ನಿರ್ಮಿಸಲು ಮನವಿ

ಒಟ್ಟು ಓದುಗರ ಸಂಖ್ಯೆ : 13071+

ಜಿಲ್ಲಾಡಳಿತ ಭವನದಲ್ಲಿ ವಿಶ್ವವಿಕಲಚೇತನರ ದಿನಾಚರಣೆ

ಒಟ್ಟು ಓದುಗರ ಸಂಖ್ಯೆ : 14960+

ಸುವಿದ್ಯಾ ನಿಧಿ ಮೂಲಕ ಪ್ರಥಮ ಚಿಕಿತ್ಸೆ ಜಾಗೃತಿ ಕಾರ್ಯಕ್ರಮ

ಒಟ್ಟು ಓದುಗರ ಸಂಖ್ಯೆ : 15128+

ಬಿಜೆಪಿ ರಾಷ್ಟ್ರಾಧ್ಯಕ್ಷರ ಆಯ್ಕೆ ಪ್ರಕ್ರಿಯೇ ಸ್ತ್ರೀ ಶಕ್ತಿ

ಒಟ್ಟು ಓದುಗರ ಸಂಖ್ಯೆ : 15468+

ಚಳಿಗಾಲ ಮತ್ತು ಆರೋಗ್ಯ

ಒಟ್ಟು ಓದುಗರ ಸಂಖ್ಯೆ : 15654+

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ಆಗ್ರಹ:

ಒಟ್ಟು ಓದುಗರ ಸಂಖ್ಯೆ : 15772+

ಹೊಸ ಅಯೋಧ್ಯ ಹುಲುಗಪ್ಪ ಟೀ ಪುಡಿ ಅವರಿಗೆ ಜಿಲ್ಲಾ ಸಮಿತಿಯಿಂದ ಸನ್ಮಾನ

ಒಟ್ಟು ಓದುಗರ ಸಂಖ್ಯೆ : 15817+

ಸಂಚಾರಿ ಸಾಥಿ ತಂತ್ರಾಶ..

ಒಟ್ಟು ಓದುಗರ ಸಂಖ್ಯೆ : 15798+

ಗ್ರೇಟರ್ ಬೆಂಗಳೂರು ಪ್ರಾಧಿಕಾರದ 369 ವಾರ್ಡ್ ಗಳ ಅಧಿಕೃತ ಪಟ್ಟಿ ಬಿಡುಗಡೆ.

ಒಟ್ಟು ಓದುಗರ ಸಂಖ್ಯೆ : 15803+

ರಾಜ್ಯ ಕೈ ನಾಯಕರ ಉಪಹಾರ ಕೂಟ...ಬಿಜೆಪಿ ವ್ಯಂಗ್ಯ...

ಒಟ್ಟು ಓದುಗರ ಸಂಖ್ಯೆ : 15827+

ಮಧುಗಿರಿಯಲ್ಲಿ ಕಾರು ಪಲ್ಟಿ: ದಂಪತಿ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ

ಒಟ್ಟು ಓದುಗರ ಸಂಖ್ಯೆ : 18073+