ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ವೆನಿಜುವೆಲಾ ಪ್ರಕರಣ: ‘ಶಬ್ದಾಸ್ತ್ರ’ ಬಳಕೆಯ ಬಗ್ಗೆ ಎದ್ದ ಅನುಮಾನಗಳು
ವರದಿಗಾರರು : ಮಮತಾ | ಸ್ಥಳ : Bengaluru | ದಿನಾಂಕ : 14-01-2026

ವೆನಿಜುವೆಲಾ ಪ್ರಕರಣ: ‘ಶಬ್ದಾಸ್ತ್ರ’ ಬಳಕೆಯ ಬಗ್ಗೆ ಎದ್ದ ಅನುಮಾನಗಳು

ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಬಂಧನಕ್ಕಾಗಿ ಅಮೆರಿಕ ಇತ್ತೀಚೆಗೆ ನಡೆಸಿದ ಕಾರ್ಯಾಚರಣೆಯ ವೇಳೆ ಅತ್ಯಾಧುನಿಕ ಶಬ್ದಾಸ್ತ್ರವನ್ನು ಬಳಸಲಾಗಿದೆ ಎಂಬ ಅನುಮಾನ ಮೂಡಿದೆ.

ಜ.3ರಂದು ನಡೆದ ಈ ದಾಳಿಯಲ್ಲಿ ಅಮೆರಿಕದ ಸಣ್ಣ ಪಡೆಯು ಸುಧಾರಿತ ತಂತ್ರಜ್ಞಾನದ ಮೂಲಕ ವೆನೆಜುವೆಲಾದ ರೇಡಾರ್ ವ್ಯವಸ್ಥೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಿತ್ತು ಎಂದೂ ವರದಿಯಾಗಿದೆ. ದಾಳಿ ವೇಳೆ ನಡೆದಿದ್ದೇನು?

- ಏಕಾಏಕಿ ಕಿವಿಗಡಚಿಕ್ಕುವಂಥ ಭಾರೀ ಶಬ್ದ ಕೇಳಿಬಂತು - ತೀವ್ರ ಶಬ್ದ ತರಂಗಗಳಿಂದ ಸೈನಿಕರು ಚದುರಿಹೋದರು - ಸೈನಿಕರ ಮೂಗಿನಿಂದ ರಕ್ತಸ್ರಾವ ಆರಂಭವಾಯಿತು, ಕೆಲವರು ರಕ್ತ ವಾಂತಿ ಮಾಡಿಕೊಂಡರು - ಈ ಅಸ್ತ್ರದಿಂದ ತಲೆ ಸಿಡಿದುಹೋಗುವಂತಹ ಅಸಹನೀಯ ನೋವು - ಈ ನೋವಿಂದ ಯಾರೊಬ್ಬರಿಗೂ ಎದ್ದು ನಿಲ್ಲಲೂ ಸಾಧ್ಯವಾಗಲಿಲ್ಲ

ದಾಳಿ ಪ್ರದೇಶಗಳು ಡ್ರೋನ್‌ನಿಂದ ತುಂಬಿಹೋಗಿದ್ದವು. ಅಲ್ಲದೆ, ಈ ವೇಳೆ ಅಮೆರಿಕದ ಪಡೆಗಳು ವಿಚಿತ್ರವಾದ ತೀವ್ರ ಶಬ್ದ ತರಂಗಗಳನ್ನು ಪ್ರಯೋಗಿಸಿದವು. ಇದರ ಪರಿಣಾಮವಾಗಿ ಅಲ್ಲಿದ್ದ ನೂರಾರು ಸೈನಿಕರು ಚದುರಿಹೋಗುವಂತಾಯಿತು. ಸೈನಿಕರ ಮೂಗಿನಿಂದ ರಕ್ತಸ್ರಾವ ಆರಂಭವಾಗಿದ್ದಲ್ಲದೆ, ಅನೇಕರು ರಕ್ತ ವಾಂತಿ ಮಾಡುತ್ತಾ ನೆಲಕ್ಕೆ ಕುಸಿದು ಬಿದ್ದರು. ಇನ್ನು ತಲೆ ಸಿಡಿದುಹೋಗುವಂತಹ ಅಸಹನೀಯ ನೋವು ಉಂಟಾಗಿ, ಯಾರೊಬ್ಬರಿಗೂ ಎದ್ದು ನಿಲ್ಲಲೂ ಸಾಧ್ಯವಾಗಲಿಲ್ಲ ಎಂಬುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ.

ಇದು ಮೈಕ್ರೋವೇವ್ ಅಥವಾ ಲೇಸರ್ ಆಧಾರಿತ ಡೈರೆಕ್ಟೆಡ್ ಎನರ್ಜಿ ವೆಪನ್ ಇರಬಹುದು ಎಂದು ಶಂಕಿಸಲಾಗಿದೆ. ಈ ದಾಳಿಯಲ್ಲಿ ಸುಮಾರು 100 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ವೆನೆಜುವೆಲಾ ಹೇಳಿದೆ. ಶಬ್ದಾಸ್ತ್ರದಿಂದಲೇ ಈ ಎಲ್ಲ ಸಾವುಗಳೂ ಸಂಭವಿಸಿರಬಹುದೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಅಲ್ಲದೆ, ಈ ಭೀಕರ ದಾಳಿಯಲ್ಲಿ ಶಬ್ದಾಸ್ತ್ರ ಬಳಕೆಯಾಗಿದ್ದು ನಿಜವೇ ಎಂಬ ಪ್ರಶ್ನೆ ಬಗ್ಗೆ ಅಮೆರಿಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಚೀನಾ ಕೂಡ ಈ ಆಯುದ್ಧ ಬಳಸಿತ್ತೇ? ಈ ಹಿಂದೆ 2020ರ ಲಡಾಖ್ ಗಡಿ ಬಿಕ್ಕಟ್ಟಿನ ಸಂದರ್ಭದಲ್ಲಿ ಚೀನಾವು ಭಾರತೀಯ ಸೈನಿಕರ ವಿರುದ್ಧ ಮೈಕ್ರೋವೇವ್ ಆಯುಧವನ್ನು ಪ್ರಯೋಗಿಸಿತ್ತು. ಇದರಿಂದ ಭಾರತೀಯ ಸೈನಿಕರು ಅಸಹನೀಯರಾಗಿ ವಾಂತಿ ಮಾಡಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆದರೆ ಈ ಆರೋಪ ಸತ್ಯಕ್ಕೆ ದೂರವಾದದ್ದು ಹಾಗೂ ಆಧಾರರಹಿತ ಎಂದು ತಳ್ಳಿಹಾಕಿತ್ತು.

ಅಮೆರಿಕದಿಂದ ಪ್ರತಿಕ್ರಿಯೆಯಿಲ್ಲ ವೆನಿಜುವೆಲಾ ಅಧ್ಯಕ್ಷ ಮಡುರೊ ಬಂಧನಕ್ಕೆಂದು ನಡೆದ ದಾಳಿಯಲ್ಲಿ ನಿಗೂಢ ಶಬ್ದಾಸ್ತ್ರ ಪ್ರಯೋಗಿಸಲಾಗಿದೆ ಎಂದು ವೆನಿಜುವೆಲಾ ಆರೋಪಿಸಿದ್ದು, ಹಲವಾರು ತಜ್ಞರು ಮೈಕ್ರೋವೇವ್ ಅಥವಾ ಲೇಸರ್ ಆಧಾರಿತ ಡೈರೆಕ್ಟೆಡ್ ಎನರ್ಜಿ ವೆಪನ್ ಅನ್ನು ಪ್ರಯೋಗಿಸಿರಬಹುದು ಎಂದು ಶಂಕಿಸಿದ್ದಾರೆ. ಆದರೆ ಇದಕ್ಕೆ ಅಮೆರಿಕ ತಕ್ಷಣ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಏನಿದು ಡೈರೆಕ್ಟೆಡ್ ಎನರ್ಜಿ ವೆಪನ್? ಡೈರೆಕ್ಟೆಡ್‌ ಎನರ್ಜಿ ವೆಪನ್‌ನಲ್ಲಿ (ಡಿಇಡಬ್ಲ್ಯು) ಲೇಸರ್, ಮೈಕ್ರೋವೇವ್ ಅಥವಾ ಪಾರ್ಟಿಕಲ್ ಬೀಮ್‌ಗಳನ್ನು ಬೆಳಕಿನ ವೇಗದಲ್ಲಿ ಹರಿಸುವ ಮೂಲಕ ಶತ್ರುಗಳ ಡ್ರೋನ್, ಕ್ಷಿಪಣಿ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಾಶ ಪಡಿಸಲಾಗುತ್ತದೆ. ಇದರಲ್ಲಿ ಕೆಲವು ವಿಧಗಳು ಇವೆ. ಆ ಪೈಕಿ ನಿಗೂಢ ಶಬ್ದಾಸ್ತ್ರವೂ ಒಂದು. ಈ ಶಬ್ದಾಸ್ತ್ರದಲ್ಲಿ ಶತ್ರುಗಳನ್ನು ಹಿಮ್ಮೆಟ್ಟಿಸಲು ಅಥವಾ ಅಶಕ್ತರನ್ನಾಗಿ ಮಾಡಲು ತೀವ್ರವಾದ ಶಬ್ದ ತರಂಗಗಳನ್ನು ಬಳಸಲಾಗುತ್ತದೆ. ಇವುಗಳಿಗೆ ಶತ್ರುಗಳ ರೇಡಾರ್‌, ಸಂವಹನ ವ್ಯವಸ್ಥೆ ಮತ್ತು ಎಲೆಕ್ಟ್ರಾನಿಕ್ ಸರ್ಕ್ಯೂಟ್‌ಗಳನ್ನು ನಾಶ ಪಡಿಸುವ ಸಾಮರ್ಥ್ಯವಿದೆ.

ಇತರೆ ಸುದ್ದಿಗಳು

ಶಿವಭಕ್ತಿಗೆ ಹೊಸ ಆಯಾಮ: ಜಗತ್ತಿನ ಅತಿ ದೊಡ್ಡ ಶಿವಲಿಂಗ ನಿರ್ಮಿಸಿ ಇತಿಹಾಸ ಬರೆದ ಭಾರತ

Views : 49029+

ಇತಿಹಾಸದಲ್ಲೇ ಒಂದು ವಿಶೇಷ ರೆಕಾರ್ಡ್ ಅನ್ನು ಸೃಷ್ಟಿಸಿದ ನಟ ಕಿಚ್ಚ ಸುದೀಪ್ “

Views : 49062+

ರಿಲೇಷನ್ಶಿಪ್ ಹಾಗೂ ಜವಾಬ್ದಾರಿಗಳಿಂದ ವಿರಾಮ ಘೋಷಿಸಿದ ಗಾಯಕಿ “ನೆಹಾ ಕಕ್ಕರ್”

Views : 49063+

ತಾಂತ್ರಿಕ ಸಮಸ್ಯೆಗಳು ಹೆಚ್ಚಳ: ಇ-ಖಾತೆ ಪಡೆಯಲು ಜನರ ಸಂಕಷ್ಟ

Views : 49091+

ಹುಣಸೂರಿನ ಬ್ರಹ್ಮಕುಮಾರಿ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬಾಬಾ ರವರ 57ನೇ ಸ್ಮೃತಿ ದಿನವನ್ನು ಆಚರಿಸ

Views : 49256+

ಶ್ರೀ ಮತಿ ಮಿನಾಕ್ಷಿ ಮದಾಪ್ಪಾ ಅವರ ಅಧ್ಯಕ್ಷತೆಯಲ್ಲಿ ಮಹಾಕವಿ ವೇಮನ್ ಅವರ ಜಂಯತೋತ್ಸವ ಆಚರಿಸಿದ ಆಣದೂರ ಗ್ರಾಮ ಪ�

Views : 49323+

ಮದ್ದೂರು | ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಕಾಮಗಾರಿಗಳ ಪರಿಶೀಲನೆ

Views : 49444+

ಧೂಮಪಾನಕ್ಕೂ ಮೀರಿದ ಅಪಾಯ: ಪ್ರತಿದಿನ ಹೆಚ್ಚುತ್ತಿರುವ ಸಾವುಗಳು

Views : 49629+

ಅಮವಾಸ್ಯೆ ಮರುದಿನ ಹನೂರು ತಾಲ್ಲೂಕಿನಲ್ಲಿ ಬಸ್ ಕೊರತೆ: ಗ್ರಾಮೀಣ ವಿದ್ಯಾರ್ಥಿಗಳಿಗೆ ಶಾಲೆ–ಕಾಲೇಜು ಪ್ರಯಾಣ ದು�

Views : 49574+

ಹನುಮಂತ ಹೊತ್ತು ತಂದ ಪರ್ವತ ನೋಡಿ ಆಶ್ಚರ್ಯಚಕಿತರಾದರು!

Views : 49741+

4610 ದೇವಸ್ಥಾನಗಳು ನಾಪತ್ತೆಯಾಗಿದ್ದು ನಿಜಾನಾ? ಮುಜರಾಯಿ ಇಲಾಖೆ ಹೇಳಿದ್ದೇನು ಗೊತ್ತಾ?

Views : 49746+

ಅಕ್ರಮ ಮಣ್ಣು ಸಾಗಣೆ ಸೇರಿ ವಿವಿಧ ಆರೋಪಗಳ ಸಾಕ್ಷ್ಯಗಳೊಂದಿಗೆ ಪ್ರತಿಭಟನಾ ಮೆರವಣಿಗೆ, ಜ.19ಕ್ಕೆ ದಾವಣಗೆರೆ ಗ್ರಾಮ

Views : 49763+

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು: ಬಿಜೆಪಿ ಶಾಸಕ ಬಿ. ಪಿ. ಹರೀಶ್

Views : 49760+

ಗಾಂಧಿ ಗ್ರಾಮ ಪ್ರಶಸ್ತಿಯಲ್ಲಿ ತಾರತಮ್ಯ ಆರೋಪ ಜನವರಿ 19ರಂದು ಗ್ರಾಮಸ್ಥರಿಂದ ಜಿ.ಪಂ ಎದುರಗಡೆ ಧರಣಿ

Views : 49785+

ಇತಿಹಾಸಕ್ಕೆ ಸಾಕ್ಷಿಯಾದ ಕ್ಯಾಮೇನಹಳ್ಳಿ ರಾಸುಗಳ ಜಾತ್ರೆ.. ಕಮನೀಯ ಕ್ಷೇತ್ರದಲ್ಲಿ ಕಾಮಧೇನುಗಳ ಜಾತ್ರೆ ಹಬ್ಬ..

Views : 49806+

ದ್ವಿಚಕ್ರ ವಾಹನ ಸವಾರರಿಗೆ ಹೊಸ ನಿಯಮ: ಎಬಿಎಸ್ ಕಡ್ಡಾಯ ಎಂದ “ನಿತಿನ್ ಗಡ್ಕರಿ”

Views : 51264+

ವೇಗ ಬೇಡ, ಜೀವ ಬೇಕು: 10 ನಿಮಿಷ ಡೆಲಿವರಿ ವಿರುದ್ಧ ಕಾರ್ಮಿಕರ ಮನವಿ

Views : 51349+

ಕಾಲೋನಿಯ ಪ್ರತಿಯೊಂದು ಮನೆಗೆ ತೆರಳಿ ಸಿಹಿ ತಿಂಡಿ ತಿನಿಸುಗಳನ್ನು ನೀಡಿ ಹಿರಿಯರ ಆಶಿರ್ವಾದ ಪಡೆಯುವ ಮೂಲಕ ಮಕರ ಸ

Views : 51673+

ದರ್ಭಾಂಗ ರಾಜಮನೆತನದ ಕೊಂಡಿ ಕಳಚಿತು: ಕಾಮಸುಂದರಿ ದೇವಿ ನಿಧನ

Views : 51678+

ಕೆಂಪೇಗೌಡ ಯುವಶಕ್ತಿ ವೇದಿಕೆಯ 8ನೇ ವಾರ್ಷಿಕೋತ್ಸವ: ಯಲಿಯೂರಿನಲ್ಲಿ ಸಂಕ್ರಾಂತಿ ಸಂಭ್ರಮ

Views : 52111+

ಈ ಊರಲ್ಲಿ ಗ್ಯಾಸ್ ಇಲ್ಲ, ಕಟ್ಟಿಗೆಯೂ ಇಲ್ಲ! ಹಾಗಾದ್ರೆ ಅಡುಗೆ ಆಗೋದು ಹೇಗೆ? ತಿಳಿದ್ರೆ ಆಶ್ಚರ್ಯವಾಗುತ್ತೆ!

Views : 52095+

ವಿಧವೆ ಸೊಸೆಗೆ ನ್ಯಾಯ: ಮಾವನ ಆಸ್ತಿಯಿಂದ ಜೀವನಾಂಶ ನೀಡಲು ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Views : 57054+

ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಸಿಹಿ ಸುದ್ದಿ : QR ಕೋಡ್ ಆಧಾರಿತ ಅನ್'ಲಿಮಿಟೆಡ್ ಪಾಸ್ ನಾಳೆಯಿಂದಲೇ ಜಾರಿ

Views : 57037+

ಅರಳಿ ಮರವು ಎಲ್ಲಾ ಮರಗಳ ತಾಯಿ ಮರವಾಗಿದೆ” – ಡಾ. ಪಿ.ಎಸ್. ಲಕ್ಕಿ

Views : 57047+