TAPCMS ಸಂಘದ 67ನೇ ವಾರ್ಷಿಕ ಸರ್ವಸಾಧಾರಣ ಸಭೆ ಜಮಖಂಡಿಯಲ್ಲಿ ಜರುಗಿತು
ಜಮಖಂಡಿ ನಗರದಲ್ಲಿ ಅತಿ ಹಿರಿಯವಾದ TAPCMS ಸಂಘದ 67ನೇ ವಾರ್ಷಿಕ ಸರ್ವಸಾಧಾರಣ ಸಭೆಯು 20 ಸೆಪ್ಟೆಂಬರ್ 2025ರಂದು S R A ಹಾಲ್ನಲ್ಲಿ ಭವ್ಯವಾಗಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶ್ರೀ ಮಹಾಲಿಂಗ ತಳವಾರ್ ವಹಿಸಿ ಮಾತನಾಡಿದರು. ಸಂಘವು ಸ್ಥಾಪನೆಯಾಗಿರುವ ಪ್ರಾರಂಭಿಕ ಉದ್ದೇಶಗಳನು ಸದಾ ಪಾಲನೆ ಮಾಡುತ್ತಾ, ಇಂದು ಪ್ರಗತಿಪಥದಲ್ಲಿ ಯಶಸ್ವಿಯಾಗಿ ಸಾಗುತ್ತಿದೆಯೆಂದು ಹೇಳಿದರು. 2024-25 ಸಾಲಿನಲ್ಲಿ ₹23,24,887 ನಿವ್ವಳ ಲಾಭವನ್ನು ಸಂಘವು ಗಳಿಸಿದ್ದೇವೆ ಎಂದೂ ತಿಳಿಸಿದರು.
ನಿರ್ದೇಶಕ ಶ್ರೀ ಪರಶುರಾಮ್ ಬಿಸನಾಳ ಪ್ರಾಸ್ಥಾವಿಕವಾಗಿ ಮಾತನಾಡಿ, ಒಟ್ಟು ಎಂಟು ನ್ಯಾಯಬೆಲೆ ಅಂಗಡಿಗಳು ಸಂಘಕ್ಕೆ ಸೇರಿದವು ಮತ್ತು ಸರಕಾರದಿಂದ ದೊರಕುವ ಬೆಂಬಲ ಬೆಲೆಗೆ ರೈತರಿಂದ ಬೆಳೆ ಖರೀದಿಸುವ ಮೂಲಕ ರೈತ ಬಾಂಧವರಿಗೆ ಸಹಕಾರ ನೀಡುವ ಕೆಲಸದಲ್ಲಿ ಸಂಘ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ. ಗ್ರಾಹಕರು ಕಾಲಕ್ಕೆ ಸಾಲವನ್ನು ಮರುಪಾವತಿಸಿದ ಕಾರಣ ಸಂಘ ಲಾಭದಲ್ಲಿದೆ ಎಂದು ಹೇಳಿದರು.
ನಿರ್ದೇಶಕರಾದ ನಿಂಗಪ್ಪ ಕಡಪಟ್ಟಿ ವರದಿ ವಾಚಿಸಿದರು. ಸಭೆಯಲ್ಲಿ ವೇದಿಕೆಯಲ್ಲಿ ನಿರ್ದೇಶಕರು ಶ್ರೀ ಯೋಗಪ್ಪ ಸೌದಿ, ಶ್ರೀ ಬಸವರಾಜ್ ಸಿಂಧೂರ ಮತ್ತು ಉಪಾಧ್ಯಕ್ಷರಾದ ಶ್ರೀ ಶೀತಲ್ ಕುಮಾರ್ ದೇಸಾಯಿ ಉಪಸ್ಥಿತರಿದ್ದರು.
ಸಭೆಗೆ ಷೇರುದಾರರು, ಗ್ರಾಹಕರು ಮತ್ತು ರೈತ ಬಾಂಧವರು ಪಾಲ್ಗೊಂಡು ತಮ್ಮ ಬೆಂಬಲವನ್ನು ತೋರಿಸಿದರು.
ಇತರೆ ಸುದ್ದಿಗಳು