ಏಳ್ಳಿನಮವಾಸೆ ಮತ್ತು ತೀರ್ಥಹಳ್ಳಿ!!!!!
ಪೌರಾಣಿಕ ಹಿನ್ನಲೆಯಿಂದ ನೋಡಿದಾಗ ಏಳ್ಳಮವಾಸೆಗೆ ವಿಶಿಷ್ಠ ಇತಿಹಾಸವಿದೆ.
ಜಮದಗ್ನಿ ರೇಣುಕಾದೇವಿಯ ಮಗನಾಗಿ ಪರಶುರಾಮ ಜನಿಸುತ್ತಾನೆ. ಪರಶುರಾಮ ವಿಷ್ಣುವಿನ ಆರನೇ ಅವತಾರವೆಂತಲೂ ಕರೆಯುತ್ತಾರೆ. ಜಮದಗ್ನಿ ಋಷಿಯು ಮಹಾತಪಸ್ವಿ ಹಾಗೆ ಮಹಾ ಕೋಪಿಷ್ಠನಾಗಿದ್ದ. ಪರಶುರಾಮ ಮಹಾ ಶಿವ ಭಕ್ತ ಅವನ ಭಕ್ತಿಗೊಲಿದ ಶಿವ ಪರಶು ಎಂಬ ಆಯುಧವನ್ನ ನೀಡುತ್ತಾನೆ. ಅಂದಿನಿಂದ ಪರಶುರಾಮ ಎಂಬ ನಾಮದೇಯದಿಂದ ಪ್ರಖ್ಯಾತನಾಗುತ್ತಾನೆ.
ಒಂದು ಪ್ರತಿಕೂಲ ಸನ್ನಿವೇಶದಲ್ಲಿ ಮಹಾಕೋಪಿಷ್ಢನಾದ ಜಮದಗ್ನಿ ತನ್ನ ಪತ್ನಿ ರೇಣಿಕಾದೇವಿಯನ್ನು ಸಂಹರಿಸಲು ಮಗ ಪರಶುರಾಮನಿಗೆ ಆಜ್ಞೆ ನೀಡುತ್ತಾನೆ
ಪರಶುರಾಮ ತನ್ನ ತಂದೆಯ ಮಾತಿನಂತೆ ತಾಯಿ ರೇಣುಕಾದೇವಿಯ ರುಂಡವನ್ನು ಕೊಡಲಿಯಿಂದ ಕಡಿದುಬಿಡುತ್ತಾನೆ. ತದನಂತರ ರಕ್ತಸಿಕ್ತವಾದ ಕೊಡಲಿಯನ್ನ ತೊಳೆಯಲು ಅನೇಕ ನದಿಗಳಿಗೆ ತೆರಳುತ್ತಾನೆ. ಆದರೆ ಕೊಡಲಿಗೆ ಅಂಟಿದ ರಕ್ತದ ಕಲೆ ಮಾಸದೇ ಪಶ್ಚಾತಾಪಕ್ಕೊಳಗಾಗುತ್ತಾನೆ.
ಆಗ ಕರ್ನಾಟಕದ ಶಿವಮೊಗ್ಗದಲ್ಲಿರುವ ಒಂದು ಚಿಕ್ಕ ಹಳ್ಳಿಯ ಬಳಿಯಿರುವ ತುಂಗಭದ್ರಾ ನದಿ ನೀರಿನಲ್ಲಿ ತೊಳೆದಾಗ ಕೊಡಲಿಗೆ ಅಂಟಿದ ರಕ್ತದ ಕಲೆ ಅಳಿಸಿಹೋಗುತ್ತದೆ. ಅಂದಿನಿಂದ ಆ ಹಳ್ಳಿಯು ತೀರ್ಥಹಳ್ಳಿ ಎಂಬ ಹೆಸರಿನಿಂದ ಪ್ರಖ್ಯಾತವಾಯಿತು ಎಂದು ಹೇಳಲಾಗುತ್ತಿದೆ.
ತೀರ್ಥ ಎಂದರೆ ಶುದ್ಧ ಪವಿತ್ರ, ಹಳ್ಳಿ ಎಂದರೆ ಗ್ರಾಮ. ಕೊಡಲಿಗೆ ಅಂಟಿದ ರಕ್ತದ ಕಲೆ ಅಳಿಸಿದ ಆ ದಿನ ಎಳ್ಳಮವಾಸೆ ದಿನವಾಗಿತ್ತು ಅಂದಿನಿಂದ ಹಳ್ಳಿಯಲ್ಲಿರುವ ತುಂಗಾ ನದಿ ನೀರು ಪವಿತ್ರತೆಯಿಂದ ಕೂಡಿದೆ ಎಂಬುದರ ಸಂಕೇತವಾಗಿದೆ ತೀರ್ಥಹಳ್ಳಿ ಎಂದು ಕರೆಯಲಾಯಿತು. ಇಂದಿಗೂ ಪ್ರತಿ ವರ್ಷ ಎಳ್ಳಿನಮವಾಸೆಯ ದಿನ ಭಕ್ತಾದಿಗಳು ತೀರ್ಥಹಳ್ಳಿಯಲ್ಲಿರುವ ತುಂಗಭದ್ರಾ ನದಿ ನೀರಿನಲ್ಲಿ ಸ್ನಾನ ಮಾಡುತ್ತಾರೆ.
ಇತರೆ ಸುದ್ದಿಗಳು