ದಾವಣಗೆರೆ ರಸ್ತೆ ಅಗಲೀಕರಣ ಕಾಮಗಾರಿಗೆ ಪೂಜೆ
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಎಲ್.ಐ.ಸಿ ಕಛೇರಿಯಿಂದ ಬೈಪಾಸ್ ವರೆಗೆ ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆ ಲೋಕೋಪಯೋಗಿ ಇಲಾಖೆ ಅನುದಾನದಡಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಹರಿಹರ ವಿಧಾನಸಭಾ ಕ್ಷೇತ್ರ ಕ್ಷೇತ್ರದ ಶಾಸಕರಾದ ಬಿಪಿ ಹರೀಶ್. ಶ್ರೀ ಅಜೀತ್ ಸಾವಂತ್ ನಗರ ಅಧ್ಯಕ್ಷರು ಹರಿಹರ ರವರು, ಮುಖಂಡರಾದ ಬಾತಿ ಚಂದ್ರಶೇಖರ್, ಶ್ರೀ ರಾಜು ರೋಕಡೆ, ನಗರ ಸಭೆ ಸದಸ್ಯರಾದ ಶ್ರೀ ಹನುಮಂತಪ್ಪ, ಶೇರಾಪುರದ ಅಜ್ಜಪ್ಪ, ಗೀರಿಗೌಡ್ರು, ನಂದಿಗಾವಿ ರಮೇಶ್, ಚಂದ್ರಕಾಂತ್, ನವೀನ್, ಸಂತೋಷ ರಾಜನಹಳ್ಳಿ, ಮುಖಂಡರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು