ಕಲಘಟಗಿ ಶ್ರೀ ಹನ್ನೆರಡು ಮಠದಲ್ಲಿ ಮಡಿವಾಳ ಶಿವಾಚಾರ್ಯರ ಪುಣ್ಯಸ್ಮರಣೋತ್ಸವ–ಪಟ್ಟಾಧೀಕಾರ ವಾರ್ಷಿಕೋತ್ಸವ ಅದ್�
ಕಲಘಟಗಿ, ಧಾರವಾಡ: ಕಲಘಟಗಿ ಪಟ್ಟಣದ ಹೊರವಲಯದಲ್ಲಿರುವ ಶ್ರೀ ಹನ್ನೆರಡು ಮಠದಲ್ಲಿ ಮಂಗಳವಾರ ಲಿಂಗೈಕ್ಯ ಶ್ರೀ ಮಡಿವಾಳ ಶಿವಾಚಾರ್ಯ ಮಹಾಸ್ವಾಮಿಗಳ 35ನೇ ವರ್ಷದ ಪುಣ್ಯಸ್ಮರಣೋತ್ಸವ ಹಾಗೂ ಶ್ರೀ ಅಭಿನವ ಮಡಿವಾಳ ಶಿವಾಚಾರ್ಯರ 1ನೇ ವರ್ಷದ ಪಟ್ಟಾಧೀಕಾರ ವಾರ್ಷಿಕೋತ್ಸವ ಯಶಸ್ವಿಯಾಗಿ ಮತ್ತು ಭಭ್ರವಾಗಿ ಜರುಗಿತು. ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಗೊಂಡು ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ, ಗುಗ್ಗಳ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಶ್ರೀಗಳಿಂದ ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ ಲಿಂಗದೀಕ್ಷೆಯೂ ಜರುಗಿತು. ನಂತರ ಮುತ್ತೈದೆಯರ ಕುಂಭ, ವಾದ್ಯಗಳ ವೈಭವ, ಸಾಂಪ್ರದಾಯಿಕ ಕಲೆಗಳೊಂದಿಗೆ ಶ್ರೀಗಳ ಭಾವಚಿತ್ರದ ಮೆರವಣಿಗೆ ಕಲಘಟಗಿ ಪಟ್ಟಣದ ಪ್ರಮುಖ ರಾಜ ಬೀದಿಗಳಲ್ಲಿ ಸಂಚರಿಸಿ, ನಂತರ ಮಠಕ್ಕೆ ಆಗಮಿಸಿತು.
ಕಾರ್ಯಕ್ರಮಕ್ಕೆ ಶ್ರೀ ರೇವಣಸಿದ್ಧ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದು, ರಂಭಾಪುರಿ ಪೀಠ ಸೇರಿದಂತೆ ಹಲವು ಮಠಗಳ ಸ್ವಾಮೀಜಿಗಳು ಧಾರ್ಮಿಕ ಪ್ರವಚನ ನೀಡಿದರು. ಬಳಿಕ ಭಕ್ತರಿಗಾಗಿ ಮಹಾಧಾಸೋಹ ಆಯೋಜಿಸಲಾಗಿತ್ತು. ವಿಭಿನ್ನ ಮಠಗಳ ಶ್ರೀಗಳು, ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ನಾಡಿನ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿ ಕಾರ್ಯಕ್ರಮಕ್ಕೆ ಭವ್ಯತೆ ಹೆಚ್ಚಿಸಿದರು.
ಇತರೆ ಸುದ್ದಿಗಳು