ಮುರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಆಯ್ಕೆಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅಭಿನಂ�
ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿ ದೆಹಲಿಯಲ್ಲಿ ನಡೆಯಲಿರುವ ಉರ್ಜಾ ಮಿಲನ್–2025 ರಾಷ್ಟ್ರಮಟ್ಟದ ಕಾರ್ಯಕ್ರಮಕ್ಕೆ ಆಯ್ಕೆಯಾದ ಮುರಾರ್ಜಿ ದೇಸಾಯಿ ವಸತಿ ಶಾಲೆ, ಬೀದರ ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ಶ್ರೀಮತಿ ಶಿಲ್ಪಾ ಶರ್ಮಾ ಅವರು ಸೋಮವಾರ ಶಾಲೆಗೆ ಭೇಟಿ ನೀಡಿ ಸತ್ಕರಿಸಿ ಅಭಿನಂದಿಸಿದರು. ಬೆಂಗಳೂರುದಲ್ಲಿ ಅಗಸ್ತ್ಯ ಇಂಟರ್ನ್ಯಾಷನಲ್ ಫೌಂಡೇಶನ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ನೂರಾರು ಮಕ್ಕಳೊಂದಿಗೆ ಸ್ಪರ್ಧೆ ನಡೆಸಲಾಗಿದ್ದು, ಬೀದರ ವಿದ್ಯಾರ್ಥಿಗಳು ಹಲವು ವಿಭಾಗಗಳಲ್ಲಿ ಪ್ರೌಢ ಸಾಧನೆ ತೋರಿದ್ದಾರೆ. ಶಿಕ್ಷಕರು ಹಾವಪ್ಪ ಅಬ್ಬೆಂದೆ (ಗೈಡ್), ಗೌತಮ್ ಕುದುರೆ (ವಿಜ್ಞಾನ) ಹಾಗೂ ಅಶೋಕ ರಾಠೋಡ (ಚಿತ್ರಕಲೆ) ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕೆಳಗಿನ ವಿಭಾಗಗಳಲ್ಲಿ ವಿಜೇತರಾದರು:
ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿಜೇತರು ಪಾವಕಿ ಸಂಜೀವರೆಡ್ಡಿ – ನವೀಕರಣೀಯ ಇಂಧನ ರಸಪ್ರಶ್ನೆ ಸ್ಪರ್ಧೆ ಸ್ನೇಹಾ ಶಿವಕುಮಾರ & ಶಿವಾನಿ ಶಾಂತಕುಮಾರ – “ಪರಿಸರ ರಕ್ಷಣೆ ನಮ್ಮ ಬದ್ಧತೆ” ಪೋಸ್ಟರ್ ತಯಾರಿಕಾ ಸ್ಪರ್ಧೆ ಸಿದ್ದು ಸಂಗಪ್ಪ & ಡಿ. ಪ್ರಜ್ವಲ್ ಗುರುನಾಥ – ಸ್ಮಾರ್ಟ್ ಅಗ್ರಿಕಲ್ಚರ್ ಸಿಸ್ಟಮ್ ವಿಜ್ಞಾನ ಮಾದರಿ ರಚನೆ ಸ್ಪರ್ಧೆ ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಕ್ಕಳಿಗೆ ಶುಭಾಶಯ ಕೋರಿ, ರಾಷ್ಟ್ರಮಟ್ಟದಲ್ಲಿಯೂ ಜಿಲ್ಲಾ ಖ್ಯಾತಿ ಹೆಚ್ಚಿಸುವಂತೆ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಚಾರ್ಯ ಚನ್ನಬಸವ ಹೆಡ್ಡೆ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.
ಇತರೆ ಸುದ್ದಿಗಳು