ಓ ನನ್ನ ಚೇತನ ಆಗು ನೀನು ಅನಿಕೇತನ. ರಾಷ್ಟ್ರಕವಿ ಜನುಮದಿನ
ಕನ್ನಡ ನಾಡು ಕಂಡ ಮಾನವತಾವಾದಿ , ರಾಷ್ರ್ಟಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ಇವರ ಕಾವ್ಯನಾಮ ಕುವೆಂಪು.
ಚಿಕ್ಕಮಗಳೂರು ಜಿಲ್ಲೆಯ ಕುಪ್ಪಳ್ಳಿಯಲ್ಲಿ 1904 ಡಿಸೆಂಬರ್ 29 ರಂದು .ಜನಿಸುತ್ತಾರೆ. ತಮ್ಮ ಶಾಲಾ ಕಾಲೇಜು ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪೂರೈಸಿ. ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾರೆ
ತದನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದರು. ಜಯ ಭಾರತ ಜನನಿಯ ತನುಜಾತೆ ಬರೆದು ಕರ್ನಾಟಕ ಸರ್ಕಾರದಿಂದ ಗೌರವ ರಾಷ್ಟ್ರಕವಿ ಎಂಬ ಬಿರುದಾಂಕಿತದಿಂದ ಸನ್ಮಾನಿತರಾಗುತ್ತಾರೆ.
ಕುವೆಂಪು ಅವರು ಅನೇಕ ನಾಟಕಗಳನ್ನು ರಚಿಸುತ್ತಾರೆ. ಮಲೆಗಳಲ್ಲಿ ಮದುಮಗಳು. ಕಾನೂರು ಹೆಗ್ಗಡತಿ ಹೀಗೆ ಅನೇಕ ಪ್ರಸಿದ್ಧ ಕಾದಂಬರಿಗಳನ್ನು ಬರೆಯುತ್ತಾರೆ. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಕೃತಿ ರಚನೆಗೆ ಶ್ರೇಷ್ಠ ಜ್ಞಾನಪೀಠ ಗೌರವಕ್ಕೆ ಭಾಜನರಾಗುತ್ತಾರೆ
ಭಾರತ ಸರ್ಕಾರ ಕುವೆಂಪುರವರ ಸಾಹಿತ್ಯ ಕೊಡುಗೆಗಳನ್ನ ಗುರುತಿಸಿ ಪದ್ಮವಿಭೂಷಣ ನೀಡಿ ಗೌರವಿಸುತ್ತದೆ. ಕುವೆಂಪು ಅವರ ಕೊಡುಗೆ ಕೇವಲ ಸಾಹಿತ್ಯ ಮಾತ್ರವಲ್ಲ , ಜಾತಿ, ಲಿಂಗ ತಾರತಮ್ಮದ ವಿದುದ್ಧ ಧ್ವನಿ ಎತ್ತಿ .ಎಲ್ಲರೂ ಸಮಾನತೆಯಿಂದ ಬಾಳಬೇಕು ಎಂದು ಸಾರುತ್ತಾರೆ
ಇದರಿಂದ ಕುವೆಂಪು ವಿಶ್ವ ಮಾನವರಾಗಿ ಎಲ್ಲರ ಹೃದಯಸಿಂಹಾಸನದಲ್ಲಿ ತಮ್ಮದೇ ಛಾಪು ಮೂಡಿಸಿ ಎಂದೂ ಮರೆಯಲಾಗದ ಮಾಣಿಕ್ಯನಂತೆ ಕಂಗೋಳಿಸುತ್ತಾರೆ. ನವಂಬರ್ 11 1994 ರಂದು ನಮ್ಮ ನಾಡಿನ ನೆಚ್ಚಿನ ಕವಿ ನಮ್ಮನ್ನಗಲುತ್ತಾರೆ.
ಇಂದು ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವನ್ನು ಕೇವಲ ಕನ್ನಡ ನಾಡು ಮಾತ್ರವಲ್ಲ ಇಡೀ ದೇಶ ನಲುಮೆಯಿಂದ ಆಚರಿಸುತ್ತಿದೆ .
ಇತರೆ ಸುದ್ದಿಗಳು