ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಪಿಎಂ ಇ- ಬಸ್ ಸೇವಾ ಯೋಜನೆ: ಹುಬ್ಬಳ್ಳಿ - ಬೆಳಗಾವಿಗೆ ಬರಲಿವೆ ತಲಾ 100 ಎಲೆಕ್ಟ್ರಿಕಲ್ ಬಸ್ - PM E BUS SERVICE SCHEME
ವರದಿಗಾರರು : ಡಿ ಬಿ ರಾಜೇಂದ್ರ | ಸ್ಥಳ : ಹುಬ್ಬಳ್ಳಿ | ದಿನಾಂಕ : 07-06-2025

ಪಿಎಂ ಇ- ಬಸ್ ಸೇವಾ ಯೋಜನೆ: ಹುಬ್ಬಳ್ಳಿ - ಬೆಳಗಾವಿಗೆ ಬರಲಿವೆ ತಲಾ 100 ಎಲೆಕ್ಟ್ರಿಕಲ್ ಬಸ್ - PM E BUS SERVICE SCHEME

ಕೇಂದ್ರ ಸರ್ಕಾರದ ಪಿಎಂ ಇ- ಸೇವಾ ಯೋಜನೆಯಡಿ ಹುಬ್ಬಳ್ಳಿ ಮತ್ತು ಬೆಳಗಾವಿ ‌ನಗರ ಆಯ್ಕೆಯಾಗಿದ್ದು, ಈ 2 ನಗರಗಳಿಗೆ ತಲಾ 100 ಎಲೆಕ್ಟ್ರಿಕ್​ ಬಸ್​ಗಳು ಹಂಚಿಕೆಯಾಗಲಿವೆ.

ಹುಬ್ಬಳ್ಳಿ:ಪ್ರಧಾನ ಮಂತ್ರಿ ಇ-ಬಸ್ (ಪಿಎಂ ಇ-ಬಸ್) ಸೇವಾ ಯೋಜನೆಯಡಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ (ವಾಕರಸಾ) ಸಂಸ್ಥೆಯ ಹುಬ್ಬಳ್ಳಿ ಮತ್ತು ಬೆಳಗಾವಿ ನಗರ ಆಯ್ಕೆಯಾಗಿದೆ. ಈ ಎರಡು ನಗರಗಳಿಗೆ ತಲಾ 100 ವಿದ್ಯುತ್ ಬ್ಯಾಟರಿ ಚಾಲಿತ ಬಸ್‌ಗಳ ಪೂರೈಕೆಯಾಗಲಿದ್ದು, ಎಲೆಕ್ಟ್ರಿಕ್ ಬಸ್‌ಗಳು ಹುಬ್ಬಳ್ಳಿ - ಬೆಳಗಾವಿ ನಗರಗಳಲ್ಲಿ ಸಂಚರಿಸಲಿವೆ. ಈ ಎರಡು ನಗರಗಳು ಬೆಳೆದಂತೆ ನಗರ ಸಾರಿಗೆಗೆ ಒತ್ತು‌ಕೊಡುವುದು ಸಾರಿಗೆ ಇಲಾಖೆಯ ಪ್ರಮುಖ ಆದ್ಯತೆ. ಹೀಗಾಗಿ ವಾಯುವ್ಯ ಸಾರಿಗೆ ಸಂಸ್ಥೆ ನಷ್ಟದಿಂದ ತಪ್ಪಿಸಿಕೊಳ್ಳಲು ಎಲೆಕ್ಟ್ರಿಕ್ ಬಸ್​ಗಳಿಗೆ ಆಸಕ್ತಿ ವಹಿಸಲಾಗಿತ್ತು. 2017-18ರಿಂದಲೂ ವಾಕರಸಾ ಸಂಸ್ಥೆ ಪ್ರಕ್ರಿಯೆ ಆರಂಭಿಸಿತ್ತು. ಆದರೆ, ಕಾರ್ಯಗತಗೊಂಡಿರಲಿಲ್ಲ.

2023-24ರಲ್ಲಿ ಟೆಂಡ‌ರ್ ಪ್ರಕ್ರಿಯೆ ಕೈಗೊಂಡಿತ್ತಾದರೂ ವಾಕರಸಾ ಸಂಸ್ಥೆ ಮತ್ತು ಟೆಂಡರ್‌ದಾರರ ಮಧ್ಯೆ ದರಗಳಲ್ಲಿ ಭಾರಿ ವ್ಯತ್ಯಾಸ ಉಂಟಾಗಿತ್ತು. 1ಕಿಮೀ ಗೆ 20-25 ರೂ. ದುಬಾರಿಯಾಗುತ್ತಿತ್ತು. ಇದು ಸಂಸ್ಥೆಗೆ ದೊಡ್ಡ ಹೊರೆಯಾಗಲಿದೆ ಎಂದುಕೊಂಡು ಯೋಜನೆ ಕೈ ಬಿಟ್ಟ ವಾಕರಸಾ ಸಂಸ್ಥೆಯು ಪಿಎಂಇ-ಬಸ್ ಸೇವಾ ಯೋಜನೆಗೆ ಮೊರೆ ಹೋಗಿತ್ತು. ಇದೀಗ ಕೇಂದ್ರ ಸರ್ಕಾರ ಹುಬ್ಬಳ್ಳಿ ಮತ್ತು ಬೆಳಗಾವಿ ನಗರಗಳಿಗೆ ಅನುಮೋದನೆ ನೀಡಿದ್ದು, ಮೂಲಸೌಕರ್ಯ ಒದಗಿಸಲು ಸಜ್ಜು ಮಾಡಿಕೊಳ್ಳುವಂತೆ ಸಲಹೆ ಮಾಡಿದೆ. ಪಿಎಂ ಇ- ಬಸ್ ಏಕೆ?:ಹವಾಮಾನ ವೈಪರೀತ್ಯ ಹಾಗೂ ಇಂಗಾಲ ಹೊರಸೂಸುವಿಕೆ - ತಡೆಯುವುದು ಹಾಗೂ ಏರುತ್ತಿರುವ ಜಾಗತಿಕ ತಾಪಮಾನ ನಿಯಂತ್ರಿಸಲು ಎಲೆಕ್ಟ್ರಿಕ್ ಚಾಲಿತ ಬಸ್‌ಗಳ ಸೇವೆಗೆ ಕೇಂದ್ರ ಸರಕಾರ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಇದರ ಭಾಗವಾಗಿ ಸಾರಿಗೆ ಸಂಸ್ಥೆಗಳಿಗೆ ಸಬ್ಸಿಡಿ ಆಧಾರಿತ ಎಲೆಕ್ಟ್ರಿಕ್ ಬಸ್ ಒದಗಿಸುವುದೇ ಪಿಎಂ ಇ-ಬಸ್ ಸೇವಾ ಯೋಜನೆ.

ಸಬ್ಸಿಡಿ ಲಾಭ ಪಡೆಯುವ ಸಲುವಾಗಿ ವಾಕರಸಾ ಸಂಸ್ಥೆ ಮೂರು ತಿಂಗಳ ಹಿಂದೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ, ಹುಬ್ಬಳ್ಳಿ ಮತ್ತು ಬೆಳಗಾವಿ ನಗರಗಳಿಗೆ ತಲಾ 100 ಎಲೆಕ್ಟ್ರಿಕ್ ಬಸ್​ಗಳನ್ನು ಪೂರೈಸಲಿದೆ. ಎಲೆಕ್ಟ್ರಿಕ್ ಬಸ್‌ಗಳನ್ನು ಉತ್ಪಾದಿಸುವ ಕಂಪನಿಗಳನ್ನ ಸರ್ಕಾರವೇ ಗೊತ್ತುಪಡಿಸಲಿದ್ದು, ಕಂಪನಿಯು ಗ್ರಾಸ್ ಕಾಸ್ಟ್ ಕಾಂಟ್ರ್ಯಾಕ್ಟ್ (ಜಿಸಿಸಿ) ಮಾದರಿಯಲ್ಲಿ ಬಸ್‌ಗಳ ಸೇವೆ ನೀಡಲಿವೆ. ವಾಕರಸಾ ಸಂಸ್ಥೆ ಎಂಡಿ ಪ್ರಿಯಾಂಗ ಏನಂತಾರೆ?:ಪಿಎಂ ಇ -ಬಸ್ ಯೋಜನೆ ಕುರಿತಂತೆ ವಾಕರಸಾ ಸಂಸ್ಥೆ ಎಂಡಿ ಪ್ರಿಯಾಂಗ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, "ಪಿಎಂ ಇ- ಸೇವಾ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಇದಕ್ಕೆ ಹುಬ್ಬಳ್ಳಿ ಮತ್ತು ಬೆಳಗಾವಿ ‌ನಗರ ಆಯ್ಕೆಯಾಗಿದೆ. ಇದರಿಂದ ಹುಬ್ಬಳ್ಳಿ - ಧಾರವಾಡಕ್ಕೆ 100 ಬಸ್ ಹಾಗೂ ಬೆಳಗಾವಿ ನಗರಕ್ಕೆ ‌100 ಬಸ್ ಹಂಚಿಕೆಯಾಗಲಿವೆ. ಜಿಸಿಸಿ ಮಾದರಿಯಲ್ಲಿ ‌ಕೇಂದ್ರ ಸರ್ಕಾರವೇ ಬಸ್ ಖರೀದಿಸಿ‌ ಕೊಡಲಿದೆ. ಸಂಸ್ಥೆಯಿಂದ ಡಿಪೋ ಹಾಗೂ ಬಸ್ ಚಾರ್ಜಿಂಗ್ ಬೇಕಾದಂತೆ ಸೌಲಭ್ಯ ಮಾಡಿಕೊಳ್ಳಬೇಕಿದೆ. ಇದಕ್ಕಾಗಿ ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಸ್ಥಳ ಗುರುತಿಸಲಾಗಿದೆ. ಅದರ ಡಿಪಿಆರ್ ಕೂಡ ಸಲ್ಲಿಕೆ ಮಾಡಲಾಗಿದೆ. ಅದಕ್ಕೆ ಅನುಮೋದನೆ ‌ಸಿಗುವ ವಿಶ್ವಾಸವಿದೆ" ಎಂದರು. ಏನಿದು ಜಿಸಿಸಿ ಮಾದರಿ?:ಬಸ್ ಸಂಚಾರ ಸೇವೆ, ಡ್ರೈವರ್‌ಗಳು, ಚಾರ್ಜಿಂಗ್ ಸ್ಟೇಷನ್‌ಗಳನ್ನು ಗುತ್ತಿಗೆ ಕಂಪನಿಯೇ ನಿರ್ವಹಿಸಲಿದೆ. ವಿದ್ಯುತ್ ಸಂಪರ್ಕ ಮತ್ತು ಜಾಗವನ್ನು ವಾಕರಸಾ ಸಂಸ್ಥೆ ಒದಗಿಸಲಿದೆ. ಕಿಮೀ ಲೆಕ್ಕದಲ್ಲಿ ಸಂಸ್ಥೆಯು ಕಂಪನಿಗೆ ಹಣ ಪಾವತಿಸಲಿದೆ. ಕಂಡಕ್ಟರ್​ಗಳನ್ನು ವಾಕರಸಾ ಸಂಸ್ಥೆ ಒದಗಿಸಲಿದೆ. ಸಬ್ಸಿಡಿ ಎಷ್ಟು?:"ಪಿಎಂ ಇ-ಬಸ್ ಸೇವಾ ಯೋಜನೆಯಡಿ ಕೇಂದ್ರ ಸರ್ಕಾರವು ಕಿಮೀಗೆ 24 ರೂ.ಸಬ್ಸಿಡಿ ಮೊತ್ತ ನೀಡಲಿದೆ. ಉಳಿದ ಮೊತ್ತವನ್ನು ವಾಕರಸಾ ಸಂಸ್ಥೆಗಳು ಭರಿಸಲಿವೆ. ಈ ಹಿಂದೆ ಫೇಮ್ ಯೋಜನೆಯಲ್ಲಿ ವಾಹನ ಒದಗಿಸುವ ಕಂಪನಿಗಳಿಗೆ 75-80 ರೂ.ದರ ನೀಡಬೇಕಿತ್ತು. ಇದು ಹೊರೆಯಾಗಲಿದೆ ಎಂದು ಸಂಸ್ಥೆಯು ಯೋಜನೆಯನ್ನೇ ಕೈ ಬಿಟ್ಟಿತ್ತು. ಈಗ ಸರ್ಕಾರವೇ 24 ರೂ. ಸಬ್ಸಿಡಿ ನೀಡುವುದರಿಂದ ಹೊರೆ ತಗ್ಗಲಿದ್ದು, ಸಂಸ್ಥೆಗೂ ಹೊರೆಯಾಗದು. ಹೀಗಾಗಿ ಪಿಎಂ ಇ-ಬಸ್ ಸೇವಾ ಯೋಜನೆಯಡಿ ಬಸ್ ಸೇವೆ ಪಡೆಯಲಿದ್ದೇವೆ" ಎಂದು ಪ್ರಿಯಾಂಗ ತಿಳಿಸಿದರು. ಹೊಸ ಡಿಪೋ ಎಲ್ಲೆಲ್ಲಿ?:"ಟೆಂಡ‌ರ್ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕಂಪನಿ ಬಸ್​ಗಳನ್ನು ಒದಗಿಸಲಿವೆ. ಹೀಗಾಗಿ ಹುಬ್ಬಳ್ಳಿ ಗೋಕುಲ್ ರೋಡ್​ ಹಾಗೂ ಬೆಳಗಾವಿ ಬಸ್ ನಿಲ್ದಾಣದ ಹಿಂದುಗಡೆ ಜಾಗ ಗುರುತಿಸಲಾಗಿದೆ. ಮುಂದಿನ ಹಂತದ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಲ್ಲಿಸಲಾಗಿದೆ. ಮೂಲ ಸೌಕರ್ಯಗಳು ಏನೆಲ್ಲ ಬೇಕು ಎಂಬ ಮಾಹಿತಿ ಜೊತೆಗೆ ‌ಹೆಸ್ಕಾಂನಿಂದಲೂ ಅನುಮತಿ ಪಡೆಯಲಾಗಿದೆ. ಸರ್ಕಾರ ಅನುಮತಿ‌‌ ನೀಡಿದ ತಕ್ಷಣ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು" ಎಂದು ಮಾಹಿತಿ ನೀಡಿದರು.

ಇತರೆ ಸುದ್ದಿಗಳು

ಶಿವಭಕ್ತಿಗೆ ಹೊಸ ಆಯಾಮ: ಜಗತ್ತಿನ ಅತಿ ದೊಡ್ಡ ಶಿವಲಿಂಗ ನಿರ್ಮಿಸಿ ಇತಿಹಾಸ ಬರೆದ ಭಾರತ

Views : 49029+

ಇತಿಹಾಸದಲ್ಲೇ ಒಂದು ವಿಶೇಷ ರೆಕಾರ್ಡ್ ಅನ್ನು ಸೃಷ್ಟಿಸಿದ ನಟ ಕಿಚ್ಚ ಸುದೀಪ್ “

Views : 49062+

ರಿಲೇಷನ್ಶಿಪ್ ಹಾಗೂ ಜವಾಬ್ದಾರಿಗಳಿಂದ ವಿರಾಮ ಘೋಷಿಸಿದ ಗಾಯಕಿ “ನೆಹಾ ಕಕ್ಕರ್”

Views : 49063+

ತಾಂತ್ರಿಕ ಸಮಸ್ಯೆಗಳು ಹೆಚ್ಚಳ: ಇ-ಖಾತೆ ಪಡೆಯಲು ಜನರ ಸಂಕಷ್ಟ

Views : 49091+

ಹುಣಸೂರಿನ ಬ್ರಹ್ಮಕುಮಾರಿ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬಾಬಾ ರವರ 57ನೇ ಸ್ಮೃತಿ ದಿನವನ್ನು ಆಚರಿಸ

Views : 49256+

ಶ್ರೀ ಮತಿ ಮಿನಾಕ್ಷಿ ಮದಾಪ್ಪಾ ಅವರ ಅಧ್ಯಕ್ಷತೆಯಲ್ಲಿ ಮಹಾಕವಿ ವೇಮನ್ ಅವರ ಜಂಯತೋತ್ಸವ ಆಚರಿಸಿದ ಆಣದೂರ ಗ್ರಾಮ ಪ�

Views : 49323+

ಮದ್ದೂರು | ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಕಾಮಗಾರಿಗಳ ಪರಿಶೀಲನೆ

Views : 49444+

ಧೂಮಪಾನಕ್ಕೂ ಮೀರಿದ ಅಪಾಯ: ಪ್ರತಿದಿನ ಹೆಚ್ಚುತ್ತಿರುವ ಸಾವುಗಳು

Views : 49629+

ಅಮವಾಸ್ಯೆ ಮರುದಿನ ಹನೂರು ತಾಲ್ಲೂಕಿನಲ್ಲಿ ಬಸ್ ಕೊರತೆ: ಗ್ರಾಮೀಣ ವಿದ್ಯಾರ್ಥಿಗಳಿಗೆ ಶಾಲೆ–ಕಾಲೇಜು ಪ್ರಯಾಣ ದು�

Views : 49574+

ಹನುಮಂತ ಹೊತ್ತು ತಂದ ಪರ್ವತ ನೋಡಿ ಆಶ್ಚರ್ಯಚಕಿತರಾದರು!

Views : 49741+

4610 ದೇವಸ್ಥಾನಗಳು ನಾಪತ್ತೆಯಾಗಿದ್ದು ನಿಜಾನಾ? ಮುಜರಾಯಿ ಇಲಾಖೆ ಹೇಳಿದ್ದೇನು ಗೊತ್ತಾ?

Views : 49746+

ಅಕ್ರಮ ಮಣ್ಣು ಸಾಗಣೆ ಸೇರಿ ವಿವಿಧ ಆರೋಪಗಳ ಸಾಕ್ಷ್ಯಗಳೊಂದಿಗೆ ಪ್ರತಿಭಟನಾ ಮೆರವಣಿಗೆ, ಜ.19ಕ್ಕೆ ದಾವಣಗೆರೆ ಗ್ರಾಮ

Views : 49763+

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು: ಬಿಜೆಪಿ ಶಾಸಕ ಬಿ. ಪಿ. ಹರೀಶ್

Views : 49760+

ಗಾಂಧಿ ಗ್ರಾಮ ಪ್ರಶಸ್ತಿಯಲ್ಲಿ ತಾರತಮ್ಯ ಆರೋಪ ಜನವರಿ 19ರಂದು ಗ್ರಾಮಸ್ಥರಿಂದ ಜಿ.ಪಂ ಎದುರಗಡೆ ಧರಣಿ

Views : 49785+

ಇತಿಹಾಸಕ್ಕೆ ಸಾಕ್ಷಿಯಾದ ಕ್ಯಾಮೇನಹಳ್ಳಿ ರಾಸುಗಳ ಜಾತ್ರೆ.. ಕಮನೀಯ ಕ್ಷೇತ್ರದಲ್ಲಿ ಕಾಮಧೇನುಗಳ ಜಾತ್ರೆ ಹಬ್ಬ..

Views : 49806+

ದ್ವಿಚಕ್ರ ವಾಹನ ಸವಾರರಿಗೆ ಹೊಸ ನಿಯಮ: ಎಬಿಎಸ್ ಕಡ್ಡಾಯ ಎಂದ “ನಿತಿನ್ ಗಡ್ಕರಿ”

Views : 51264+

ವೇಗ ಬೇಡ, ಜೀವ ಬೇಕು: 10 ನಿಮಿಷ ಡೆಲಿವರಿ ವಿರುದ್ಧ ಕಾರ್ಮಿಕರ ಮನವಿ

Views : 51349+

ಕಾಲೋನಿಯ ಪ್ರತಿಯೊಂದು ಮನೆಗೆ ತೆರಳಿ ಸಿಹಿ ತಿಂಡಿ ತಿನಿಸುಗಳನ್ನು ನೀಡಿ ಹಿರಿಯರ ಆಶಿರ್ವಾದ ಪಡೆಯುವ ಮೂಲಕ ಮಕರ ಸ

Views : 51673+

ದರ್ಭಾಂಗ ರಾಜಮನೆತನದ ಕೊಂಡಿ ಕಳಚಿತು: ಕಾಮಸುಂದರಿ ದೇವಿ ನಿಧನ

Views : 51678+

ಕೆಂಪೇಗೌಡ ಯುವಶಕ್ತಿ ವೇದಿಕೆಯ 8ನೇ ವಾರ್ಷಿಕೋತ್ಸವ: ಯಲಿಯೂರಿನಲ್ಲಿ ಸಂಕ್ರಾಂತಿ ಸಂಭ್ರಮ

Views : 52111+

ಈ ಊರಲ್ಲಿ ಗ್ಯಾಸ್ ಇಲ್ಲ, ಕಟ್ಟಿಗೆಯೂ ಇಲ್ಲ! ಹಾಗಾದ್ರೆ ಅಡುಗೆ ಆಗೋದು ಹೇಗೆ? ತಿಳಿದ್ರೆ ಆಶ್ಚರ್ಯವಾಗುತ್ತೆ!

Views : 52095+

ವಿಧವೆ ಸೊಸೆಗೆ ನ್ಯಾಯ: ಮಾವನ ಆಸ್ತಿಯಿಂದ ಜೀವನಾಂಶ ನೀಡಲು ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Views : 57054+

ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಸಿಹಿ ಸುದ್ದಿ : QR ಕೋಡ್ ಆಧಾರಿತ ಅನ್'ಲಿಮಿಟೆಡ್ ಪಾಸ್ ನಾಳೆಯಿಂದಲೇ ಜಾರಿ

Views : 57037+

ಅರಳಿ ಮರವು ಎಲ್ಲಾ ಮರಗಳ ತಾಯಿ ಮರವಾಗಿದೆ” – ಡಾ. ಪಿ.ಎಸ್. ಲಕ್ಕಿ

Views : 57047+