ಕುರಿಹಟ್ಟಿ ಗ್ರಾಮದಲ್ಲಿ ಕ್ಲಸ್ಟರ್ ಮಟ್ಟದ ‘ಪ್ರತಿಭಾ ಕಾರಂಜಿ’ ಕಾರ್ಯಕ್ರಮ
ಕಾನ ಹೊಸಹಳ್ಳಿ: ಸಮೀಪದ ಕುರಿಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ಚಿಕ್ಕ ಜೋಗಿಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮಕನಡುಕು (ಚಿಕ್ಕ ಜೋಗಿಹಳ್ಳಿ) ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ನಾಯ್ಕ್ ಅವರು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರತಿಭಾ ಕಾರಂಜಿಯ ಮಹತ್ವವನ್ನು ಒತ್ತಿ ಹೇಳಿದರು. ಅವರು, ಶಿಕ್ಷಕರ ಪಾತ್ರ ಬಹುಮುಖ್ಯವಾದದ್ದಾಗಿದ್ದು, ಪಾಲಕರ ಸಹಕಾರವೂ ಅದರೊಂದಿಗೆ ಸಮಾನ ಮಹತ್ವ ಹೊಂದಿದೆ ಎಂದು ಹೇಳಿದರು. ಪ್ರತಿಭಾ ಕಾರಂಜಿಯು ಮಕ್ಕಳ ಪ್ರತಿಭೆಯನ್ನು ಸಮಾಜದ ಮುಂದೆ ತೋರಿಸಲು ಉತ್ತಮ ವೇದಿಕೆ ಎಂದರು.
ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಸಮನ್ವಯ ಅಧಿಕಾರಿ ಎಸ್.ಎಸ್. ಜಗದೀಶ್ ಮಕ್ಕಳ ಪ್ರತಿಭೆಯನ್ನು ಬೆಳಕಿಗೆ ತರಲು ಪೋಷಕರು ಮತ್ತು ಶಿಕ್ಷಕರ ಶ್ರಮದ ಮಹತ್ವವನ್ನು ವಿವರಿಸಿದರು. ಅವರು, ಮಕ್ಕಳನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಗಣ್ಯರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಕ್ಲಸ್ಟರ್ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರು: ಕಂಠಪಾಠ, ಧಾರ್ಮಿಕ ಪಠ, ಕಥೆ ಹೇಳುವಿಕೆ, ಅಭಿನಯ, ಭಾಷಣ, ದೇಶಭಕ್ತಿ ಗೀತೆ, ಛದ್ಮವೇಶ, ಮಿಮಿಕ್ರಿ, ಭರತನಾಟ್ಯ, ರಸ ಪ್ರಶ್ನೆ, ಚರ್ಚಾ ಸ್ಪರ್ಧೆ, ನೃತ್ಯ, ಸಂಗೀತ, ರಂಗೋಲಿ, ಕಲೆ. ವಿಜೇತರ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು.
ಕೂಡ್ಲಿಗಿ ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಯ್ಯ, ಎಸ್.ಎಸ್. ಜಗದೀಶ್, ಕೆ.ಜಿ. ಆಂಜನೇಯ ಸಹಾಯಕ ನಿರ್ದೇಶಕ ಅಕ್ಷರ ದಾಸೋಹ, ಗ್ರಾಮ ಪಂಚಾಯಿತಿ ಪಿಡಿಒ ಭರತ್ ಕುಮಾರ್, ಮುಖ್ಯ ಶಿಕ್ಷಕರು ಜೈಕುಮಾರ್, ಜೆ.ಎನ್. ಕೋದಂಡ ರಾಮಣ್ಣ, ಎ. ವಿಶ್ವನಾಥ್, ಓಬಣ್ಣ ಜನನಾಯಕ, ಎಸ್ಡಿಎಂಸಿ ಅಧ್ಯಕ್ಷರು ಕೃಷ್ಣಮೂರ್ತಿ, ಎಚ್.ಬಿ. ಮಾರಣ್ಣ, ಪಾಪಜ್ಜರು ಓಬಣ್ಣ, ಸಿ.ಎಂ. ನಾಗರಾಜ್, ಎಚ್. ದುರುಗೇಶ್, ಕಲ್ಲೇಶ್, ಎಚ್.ಎಂ. ನಾಗರಾಜ್, ರಾಜು ಹಿನ್ನಲೆ ಗಾಯಕ ಸೇರಿದಂತೆ 22 ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ಗ್ರಾಮದ ಮುಖಂಡರು.
ಕುರಿಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಬೊಮ್ಮರಾಜು ಅವರು ಮೊಸಳೆಯ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಇತರೆ ಸುದ್ದಿಗಳು