ಗಂಗಾವತಿಯಲ್ಲಿ ಸಾಹಿತ್ಯ ಸಡಗರ: ಮೆಟ್ರಿ ಅವರ ಮೂವರು ಕೃತಿಗಳ ಬಿಡುಗಡೆ
ಗಂಗಾವತಿ: ನಗರದ ಹಿರಿಯ ಕವಿ ಶರಣಪ್ಪ ಮೆಟ್ರಿ ಅವರ ಮೂರು ಹೊಸ ಕೃತಿಗಳ ಲೋಕಾರ್ಪಣೆ ಗಂಗಾವತಿಯ ಕನ್ನಡ ಜಾಗೃತಿ ಭವನದಲ್ಲಿ ರವಿವಾರ ಭವ್ಯವಾಗಿ ಜರುಗಿತು. ಈ ಸಂಭ್ರಮವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ – ಗಂಗಾವತಿ ಕೇಂದ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು – ಗಂಗಾವತಿ ಘಟಕ ಇವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಪ್ರಾರಂಭದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾಹಿತ್ಯ ಸಂಸ್ಕೃತಿಗೆ ಗೌರವ ಅರ್ಪಿಸಲಾಯಿತು.
ಸಮಾರಂಭಕ್ಕೆ ಡಾ. ಎಚ್.ಎಂ. ಚಂದ್ರಶೇಖರ್ ಶಾಸ್ತ್ರಿ ಮತ್ತು ಎನ್. ಜಡೆಪ್ಪ ಮೆಟ್ರಿ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ನಗರಸಭೆಯ ಮಾಜಿ ಸದಸ್ಯ ಎಫ್. ರಾಘವೇಂದ್ರ, ಎಸ್.ಪಿ. ಪಾಟೀಲ್, ಗುಂಡೂರು ಅಶೋಕ ರಾಯ್ಕರ್, ಹಾಗೂ ಸಾಹಿತ್ಯ ಪರಿಷತ್ತಿನ ಬಳ್ಳಾರಿ ವಿಭಾಗದ ಸಂಯೋಜಕ ಶ್ರೀಧರ್ ಉಪಸ್ಥಿತರಿದ್ದರು. ಇವರು ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಿದರು.
ಲೋಕಾರ್ಪಣೆಗೊಂಡ ಕೃತಿಗಳು: ಚದುರ ಪದಗಳು – ಪವನ್ ಕುಮಾರ್ ಗುಂಡು ಮಧುರ ಶಾಯರಿಗಳು – ಬನ್ನಿಕೊಪ್ಪ ರಮೇಶ್ ರನ್ನ ಗನ್ನಡಿ – ಡಿ. ಬಸವರಾಜ
ಈ ಕೃತಿಗಳ ಕುರಿತು ಪ್ರಕಾಶಮಾನವಾದ ವಿಚಾರಗಳನ್ನು ಸಾಹಿತ್ಯ ಪ್ರೇಮಿಗಳು ಮತ್ತು ಅಧ್ಯಾಪಕರು ಕಾರ್ಯಕ್ರಮದಲ್ಲಿ ಹಂಚಿಕೊಂಡರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
ಇತರೆ ಸುದ್ದಿಗಳು