ಅಟಲ್ ಎಂಬ ಅಜಾತಶತ್ರು.
ಸರ್ವಶಿಕ್ಷಣ ಅಭಿಯಾನ ಎಂಬ ಅಕ್ಷರ ಕ್ರಾಂತಿಯನ್ನ ಅನಾವರಣಗೊಳಿಸ ಧೀಮಂತ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನ ಇಂದು.
1924 ಡಿಸೆಂಬರ್ 25 ರಂದು ಜನಿಸಿದ ಅಟಲ್ ಬಿಹಾರಿ ವಾಜಪೇಯಿ ಎಲ್ಕರ ಹೃನ್ಮಗಳನ್ನ ಗೆದ್ದ ಪರಾಕ್ರಮಿ ಅಜಾತ ಶತ್ರು
ವಾಜಪೇಯಿ ತಮ್ಮ ಕವಿಹೃದಯದ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಅವರ ಸರಳ ಸಜ್ಜನಿಕೆ ಎಷ್ಟರಮಟ್ಟಿಗೆ ಪ್ರಭಾವಿತವಾಗಿತ್ತೆಂದರೆ ವಿರೋಧ ಪಕ್ಷದ ಸದಸ್ಯರು ಸಹ ಅಟಲ್ ಜೀ ಮಾತುಗಳನ್ನು ತದೇಕಚಿತ್ತದಿಂದ ಆಲಿಸುತ್ತಿದ್ದರು.
ಅಟಲ್ ಜೀ ಕೇವಲ ಕವಿ ಹೃದಯ ಮಾತ್ರವಲ್ಲ ಆಡಳಿತದಲ್ಲಿ ತಾವು ನಂಬಿದ ಸಿದ್ಧಾಂತ ಮತ್ತು ಅಳವಡಿಸಿಕೊಂಡ ಆದರ್ಶಗಳಿಂದ ಪಕ್ಷಾತೀತವಾಗಿ ಆಡಳಿತ ನಡೆಸಿದ ನೇತಾರರು ಯಾರಾದರೂ ಇದ್ದರೆ ಅದು ಭಾರತ ಕಂಡ ಒಬ್ಬರೇ ಒಬ್ಬ ನೇತಾರರೆಂದರೆ ಅಟಲ್ ಬಿಹಾರಿ ವಾಜಪೇಯಿ ಮಾತ್ರ ಎಂಬುದು ಗಮನಾರ್ಹ
1996 ರಲ್ಲಿ ಭಾರತ ದೇಶದಲ್ಲಿ ಕಾಂಗ್ರಸ್ಸೇತರ ಪ್ರಧಾನಿಯಾದರು. ನಂತರ 1998 ರಲ್ಲಿ ಹನ್ನೊಂದು ತಿಂಗಳುಗಳ ಕಾಲ ಮಾತ್ರ ಪ್ರಧಾನಿಯಾಗಿ ಆಡಳಿತ ನಡೆಸಿದರು. ತದನಂತರ. 1999 ರಿಂದ 2004 ರವರೆಗೆ ಐದು ವರ್ಷ ಪೂರ್ಣಾವಧಿಗೆ ಪ್ರಧಾನಿಯಾಗಿ ಜನಪರ ಆಡಳಿತ ನಡೆಸಿಕೊಟ್ಟರು.
ಸ್ನೆಹಕ್ಕೆ ಸ್ನೇಹ...ಪಕ್ಜದ ದೇಶ ಪಾಕಿಸ್ತಾನದೊಂದಿಗೆ ಸ್ನೆಹ ಪರ ಬಾಂಧವ್ಯವನ್ನು ಬೆಸೆಯಲು ಅಟಲ್ ಜೀ ದೆಹಲಿಯಿಂದ ಪಾಕಿಸ್ತಾನದ ಲಾಹೋರ್ಗೆ ಬಸ್ ಸೇವೆಯನ್ನು ಆರಂಭಿಸಿದ್ದರು. ಆದರೆ ಕುತಂತ್ರಿ ಪಾಕ್ ವಿಶ್ವಾಸ ಘಾತುಕತನ ಮಾತ್ರ ಬಿಡಲಿಲ್ಲ. ಆಗ ಅಟಲ್ ಜೀ ತಾವು ಸ್ನೆಹಕ್ಕೆ ಮಾತ್ರವಲ್ಲ ಸಮರಕ್ಕೂ ಸೈ ಎಂದು ಕಾರ್ಗಿಲ್ ಕದನದ ಮೂಲಕ ಪಾಕಿಸ್ತಾನದ ಹುಟ್ಟಡಗಿಸಿದರು.
ಭಾರತದಲ್ಲಿ ಅನಕ್ಷರತೆ ತಾಂಡವಾಡುತ್ತಿತ್ತು ಇದಕ್ಜೆ ಪರಿಹಾರವಾಗಿ ಸರ್ವಶಿಕ್ಷಣ ಅಭಿಯಾನವನ್ನು ಜಾರಿಗೆ ತಂದರು. ಈ ಅಭಿಯಾನದ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನೂ ಅಕ್ಷರಸ್ಥನಾಗಬೇಕೆಂಬುದು ಅಟಲ್ ಜೀ ಅವರ ಆಶಯವಾಗಿತ್ತು.
ನುಡಿಯದೇ ಮಾಡಿ ತೋರಿಸುವ ಪ್ರವೃತ್ತಿ ಅಟಲ್ ಜೀ ಅವರದ್ದಾಗಿತ್ತು. ದೂರದೃಷ್ಠಿತ್ವದಿಂದ ಭಾರತದ ಅಭಿವೃದ್ಧಿಶೀಲತೆಗೆ ಪೂರಕ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಅವರದು. ಅವರ ಧೈರ್ಯ ಮತ್ತು ಸಾಹಸ ಪ್ರವೃತ್ತಿ ಆಡಳಿತ ಯಂತ್ರದ ಕೈಗನ್ನಡಿಯಾಗಿದ್ದು ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ. 1998 ರ ಮೇ ಹನ್ನೊಂದರಂದು ಆಪರೇಷನ್ ಶಕ್ತಿ ಎಂಬ ಹೆಸರಿನಲ್ಲಿ ಭಾರತೀಯ ಅಣು ಶಕ್ತಿಯ ಸಾಮರ್ಥ್ಯವನ್ನು ವಿಶ್ವಕ್ಕೆ ತೋರ್ಪಡಿಸಿದ ನಾಯಕ ಅಟಲ್ ಜೀ.
ವಿದೇಶಾಂಗ ನೀತಿಗೆ ಹೆಚ್ಚಿನ ಒತ್ತು ನೀಡುವಲ್ಲಿ ಅಟಲ್ ಜೀ ಪ್ರಖ್ಯಾತಿಯನ್ನ ಪಡೆದಿದ್ದರು. ರಷ್ಯಾದೊಂದಿಗೆ ಉತ್ತಮ ಬಾಂಧವ್ಯದ ಜೊತೆಗೆ ಅಮೆರಿಕ ಜೊತೆಗೂ ಸ್ನೇಹಪರತೆಯಿಂದ ಸಾಗಿದರು. ಇದರ ಫಲವಾಗಿ ಅಮೆರಿಕ ಅಧ್ಯಕ್ಷರೂ ಸಹ ಭಾರತ ಪ್ರವಾಸ ಕೈಗೊಳ್ಳುವಂತೆ ಮಾಡಿದ್ದರು.
ಧೀಮಂತ ನಾಯಕ ಅಟಲ್ ಜೀ ಅವರಿಗೆ 2015 ರಲ್ಲಿ ಎನ್.ಡಿ.ಎ ಸರ್ಕಾರದ ಪ್ರಧಾನಿಯಾಗಿದ್ದ ನರೇಂದ್ರ ಮೋದಿ ಆಡಳಿತದಲ್ಲಿ ಗೌರವ ಭಾತರ ರತ್ನ ನೀಡಿ ಗೌರವಿಸಿತು. ಅಟಲ್ ಜೀ ಅವರ 90 ವಸಂತ ಪೂರೈಸಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಟಲ್ ಬಿಹಾರಿ ವಾಜಪೇಯಿ ಅವರ ಜನುಮದಿನವನ್ನು ಸುಶಾಸನ ದಿವಸ್ ಎಂದು ಘೋಷಿಸಿತು.
ಅಗಸ್ಟ್ 16 2018 ರಂದು ಅಟಲ್ ಬಿಹಾರಿ ವಾಜಪೇಯಿ ಇಹಲೋಕ ತ್ಯೇಜಿಸಿದರು.
ಇಂದು ಡಿಸೆಂಬರ್ 25, ಹೆಮ್ಮೆಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿಯವರ ಜನ್ನದಿನವನ್ನು ಆದರಣೀಯವಾಗಿ ದೇಶ ಆಚರಿಸುತ್ತಿದೆ
ಇತರೆ ಸುದ್ದಿಗಳು